ಚಿತ್ರದುರ್ಗ: ಯಡಿಯೂರಪ್ಪನವರೇ ನಿಮಗೇ ಏನು ಆಗುವುದಿಲ್ಲ ನಾವು ಇದ್ದೆವೆ. ಎಲ್ಲಾ ಸ್ಚಾಮೀಜಿಗಳು ನಿಮಗೆ ಬೆಂಬಲ ಕೊಡುತ್ತೆವೆ ಇಂತಹ ಅಭಿವೃದ್ದಿ ಕೆಲಸ ಮಾಡುವಲ್ಲಿ ನೀವು ಅಧಿಕಾರದಲ್ಲಿ ಇರಬೇಕಾಗುತ್ತದೆ. ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಭರವಸೆ ನೀಡಿದರು.
ಮುರುಘಾ ಶರಣರು ಮ್ಯೂಸಿಯಂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ,ಒಂದು ಹಂತದಲ್ಲಿ ಯಡಿಯೂರಪ್ಪಅವರಿಗೆ ಸ್ಟಾರ್ ವ್ಯಲ್ಯೂ ಇದೆ. ಇದರಿಂದ ಅವರು ಜನರ ನಡುವೆ ಕಂಗೊಳಿಸುತ್ತಿದ್ದಾರೆ. ಯುವಕರ ನಡುವೆ ವೃದ್ದರು ಯಾರಾದ್ರು ಇದ್ದಾರೆ ಎಂದರೆ ಅದು ಯಡಿಯೂರಪ್ಪ. ಸಮಗ್ರ ಕರ್ನಾಟಕದ ಅಭಿವೃದ್ದಿ ಕೈಗೆತ್ತುಕೊಂಡಿರುವುದು ಸಂತಸ. ಯಡಿಯೂರಪ್ಪ ಅವರು ಬರದ ನಾಡು ಚಿತ್ರದುರ್ಗವನ್ನು ಕಲ್ಯಾಣ ಕರ್ನಾಟಕದ ಅಭಿವೃದ್ದಿ ಒಳಗೆ ತರಬೇಕು. ಲಿಂಗಾಯಿತ ವೀರಶೈವರಿಗೆ ಓಬಿಸಿ ವರ್ಗಕ್ಕೆ ಸೇರಿಸುವ ನಿರ್ದಾರ ಸಮೂದಾಯದಲ್ಲಿ ಸಂಚಲನವನ್ನು ಉಂಟು ಮಾಡಿದೆ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದರು.
ಸಂಯುಕ್ತವಾಣಿ