ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯರಾದ ಗೋವಿಂದ ಕಾರಜೋಳರವರ ಪುತ್ರ ರಾಜ್ಯ ಎಸ್.ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕಾರಜೋಳರವರ ೪೬ನೇ ಹುಟ್ಟು ಹಬ್ಬದ ಅಂಗವಾಗಿ ಬುಧವಾರ ನಗರದ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್, ಡಿಎಚ್.ಓ.ಡಾ.ರವೀಂದ್ರ, ಕಲುರ್ಬುಗಿಯ ಪ್ರಾಧಿಕಾರದ ಅಧ್ಯಕ್ಷರಾದ ದೀಪಕ್ ಡಿ. ನ್ಯಾಯವಾದಿಗಳಾದ ಮುರಳಿ ಕೃಷ್ಣ, ನಗರಸಭಾ ಸದಸ್ಯರಾದ ಶಶಿಧರ್, ಕೇಶವಮೂರ್ತಿ, ಭಾನುಮೂರ್ತಿ, ಆದರ್ಶ, ಕಿಶೋರ್, ಪ್ರಮೋದ್ ಸೇರಿದಂತೆ ಇತರರು ಭಾಗವಹಿಸಿದ್ದರು.