ಚಿತ್ರದುರ್ಗ: ಕರ್ತವ್ಯ ಲೋಪದ ಮೇಲೆ ನಾಯಕನಹಟ್ಟಿ ಪೋಲೀಸ್ ಠಾಣೆಯ ಮೂರು ಜನ ಪೋಲಿಸರನ್ನ ಅಮಾನತ್ತು ಮಾಡಿ ಎಸ್ಪಿ ಜಿ. ರಾಧಿಕಾ ಅದೇಶಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೋಲಿಸ್ ಠಾಣೆ ವ್ಯಾಪ್ತಿಯ ಭೀಮಗೊಂಡನಹಳ್ಳಿಯ ಹಳ್ಳದ ಪಕ್ಕದಲ್ಲಿನ ಜಮೀನೊಂದರಲ್ಲಿ ಲಕ್ಷಾಂತರ ರೂಪಾಯಿ ಪಣಕ್ಕಿಟ್ಟು ಬಹಿರಂಗವಾಗಿ ಜೂಜಾಟವಾಡುತ್ತಿರುವ ವಿಷಯದಲ್ಲಿ ಈ ಮೂವರು ಪೋಲಿಸರು . ವಿಷಯವನ್ನು ಇಲಾಖೆ ಗಮನಕ್ಕೆ ತಾರದೆ ನಿರ್ಲಕ್ಷ್ಯ ವಹಿಸಿದ್ದರು. ಬಹಿರಂಗ ಜೂಜಾಟ ಆಡುವುದನ್ನು ಸಾರ್ವಜನಿಕರು ವಿಡಿಯೋ ಮಾಡಿ ವೈರಲ್ ಮಾಡಿದ್ದರು. ನಿರ್ಲಕ್ಷ ವಹಿಸಿದ್ದ ತಿಲಕ್, ನಾಗರಾಜ್ ಮತ್ತು ರಾಮಾಂಜನೇಯ ಎಂಬ ಮೂರು ಕಾನ್ಸಟೇಬಲ್ ಗಳನ್ನು ಅಮಾನತ್ತಿಗೊಳಿಸಿದ್ದಾರೆ.
ಸಂಯುಕ್ತವಾಣಿ