ಪ್ರತ್ಯೇಕ ಅಪಘಾತ ಪ್ರಕರಣಗಳು: ಇಬ್ಬರು ಆರೋಪಿಗಳಿಗೆ ಶಿಕ್ಷೆ ನೀಡಿ ಆದೇಶಿಸಿದ‌ ನ್ಯಾಯಾಲಯ

ರಾಜ್ಯ

ಚಿತ್ರದುರ್ಗದ ಪ್ರತ್ಯೇಕ ಅಪಘಾತಗಳ ಪ್ರಕರಣಗಳಲ್ಲಿ ಆರೋಪಿಗಳಿಗೆ ಬೈಕ್ ಚಾಲಕ ಗೋಪಾಲ ಕೃಷ್ಣ ಹಾಗೂ ಲಾರಿ ಚಾಲಕ ನಾಗರಾಜನಿಗೆ ತಲಾ ಒಂದು‌ ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಯನ್ನು‌ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಮತ. ಡಿ ಅವರು ನೀಡಿ ಆದೇಶಿಸಿದ್ದಾರೆ.
ನಗರದ ಜೋಗಿಮಟ್ಟಿ‌ರಸ್ತೆಯ 4 ನೇ ಕ್ರಾಸ್ ಬಳಿ‌ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಇಲ್ಲಿ ಮಂಜಣ್ಣ ‌ಎಂಬ ವ್ಯಕ್ತಿ‌ ಸಾವನ್ನಪ್ಪಿದ್ದರು. ಇನ್ನು ಆರ್ ಟಿಓ‌ ಕಚೇರಿ‌ ಬಳಿ ಲಾರಿ‌ಬೈಕ್ ಗೆ ಡಿಕ್ಕಿ‌ ಹೊಡೆದ ಪರಿಣಾಮ ‌ಬೈಕ್ ಸವಾರ ಧನಂಜಯ ಮೃತಪಟ್ಟಿದ್ದರು. ಎರಡೂ ಪ್ರಕರಣಗಳು ಸಂಚಾರಿ ಠಾಣೆಯಲ್ಲಿ ದಾಖಲಾಗಿದ್ದು, ಸಿಪಿಐ ಗಳಾದ ಪ್ರಕಾಶ್ ಮತ್ತು ನಯೀಂ ಆಹಮದ್ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದು, ಆರೋಪ‌ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮೇಲಿನಂತೆ ತೀರ್ಪು‌ ನೀಡಿ ಆದೇಶಿಸಿದ್ದಾರೆ.

 

 

Leave a Reply

Your email address will not be published. Required fields are marked *