ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರು ಹಾಗೂ ಹಿರಿಯ ಮುಖಂಡರಾದ ಆರ್ ಕೆ ನಾಯ್ಡು ನಿಧನರಾಗಿದ್ದಾರೆ.
ಆರ್ ಕೆ ನಾಯ್ಡು ಅವರು ಸುಮಾರು 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.ಮೊದಲಿಗೆ ಹೆಚ್ ಎಂ ಟಿ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಯ್ಡು ಅವರು ಸ್ವಯಂ ನಿವೃತ್ತಿ ಪಡೆದು ಕಾಂಗ್ರೆಸ್ ಪಕ್ಷದಲ್ಲಿ ತೊಡಗಿದ್ದರು. ಚಿತ್ರದುರ್ಗ ಅವಿಭಜಿತ. ಜಿಲ್ಲೆಯಾದಾಗಿನಿಂದಲೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿದ್ದು, ಜಾಫರ್ ಷರೀಫ್ ,ಕೆ ಹೆಚ್ ರಂಗನಾಥ್, ಶಾಮನೂರು ಶಿವಶಂಕರಪ್ಪ ಇನ್ನಿತರೇ ಹಿರಿಯ ಮುಖಂಡರ ಜೊತೆಗಿನ ಒಡನಾಡಿಯಾಗಿದ್ದರು. ಕಳೆದ ಆರು ತಿಂಗಳಿಂದ ತೀವ್ರ ಆನಾರೋಗ್ಯಕ್ಕೆ ತುತ್ತಾಗಿದ್ದ ನಾಯ್ಡು ಅವರು ಮನೆಯಲ್ಲಿಯೇ ಇಂದು ನಿಧನರಾಗಿದ್ದು, ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಬಿ ಎನ್ ಚಂದ್ರಪ್ಪ, ರಾಜ್ಯ ಕಾರ್ಮಿಕ ಕಾಂಗ್ರೆಸ್ ವಿಭಾಗದ ರಾಜ್ಯಾಧ್ಯಕ್ಷ ಜಿ ಎಸ್ ಮಂಜುನಾಥ್ ಇನ್ನಿತರರು ಪಡೆದುಕೊಂಡರು.