ಚಿತ್ರದುರ್ಗದ ಡಿವೈಎಸ್ಪಿ ಎದುರು ಶರಣಾದ ರೇಣುಕಾಸ್ವಾಮಿ ಕೊಲೆಯ 8ನೇ ಆರೋಪಿ ರವಿ

ರಾಜ್ಯ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಂಟನೇ ಅರೋಪಿ ರವಿ ಇಂದು ಚಿತ್ರದುರ್ಗ ದ ಡಿವೈಎಸ್ಪಿ ದಿನಕರ್ ಮುಂದೆ ಬಂದು ಶರಣಾಗಿದ್ದಾನೆ.
ಶರಣಾದ ರವಿ ಅಲಿಯಾಸ್ ರವಿಶಂಕರ್, ಐನಹಳ್ಳಿ ಕುರುಬರಹಟ್ಟಿಯ ನಿವಾಸಿ, ರಘು ಮತ್ತು ಜಗ್ಗ ಕಾರು ಬಾಡಿಗೆಗೆ ಬೇಕೆಂದು ಕುಂಚಿಗನಾಳ್ ಬಳಿ ಆಟೋದಲ್ಲಿ ಕೇಳಿಕೊಂಡು ಬಂದಿದ್ದರು. ಇವರ ಜೊತೆಗೆ ರೇಣುಕಾ ಸ್ವಾಮಿ ಕೂಡ ಬಂದಿದ್ದು, ನಂತರ ಕಾರಿನಲ್ಲಿ‌ ಬೆಂಗಳೂರಿಗೆ ಹೋಗಿದ್ದು, ರೇಣುಕಾ ಸ್ವಾಮಿ ಸಂತೋಷದಿಂದಲೇ ಇದ್ದರು.ನಂತರ ಇಲ್ಲಿಂದ ಬೆಂಗಳೂರಿನ ಶೆಡ್ ಬಳಿಗ ಕರೆದುಕೊಂಡು ಹೋದ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ನಾನು ಕಾರನ್ನು ಬಾಡಿಗೆಗೆ ಕರೆದುಕೊಂಡು ಹೋಗಿ ನನ್ನನ್ನು ಸಂಕಷ್ಣಕ್ಕೆ‌ ಸಿಲುಕಿಸಿದ್ದಾರೆ. ಎಂದು ಹೇಳಿದ್ದಾನೆ. ಇದಕ್ಕೂ‌ ಮುನ್ನ ಟ್ಯಾಕ್ಸಿ ಸಂಘದವರ ಬಳಿ ಹೋಗಿ ಸಹಾಯ ಕೇಳಿದ್ದು, ಅವರು ರವಿಯ‌ನ್ನು ಕರೆತಂದು ಡಿವೈಎಸ್ಪಿ ಕಚೇರಿಯಲ್ಲಿ ಬಿಟ್ಡಿದ್ದು, ಅಲ್ಲಿ ಅವನು ಶರಣಾಗಿದ್ದಾನೆ.

 

 

Leave a Reply

Your email address will not be published. Required fields are marked *