ಪ್ರಕೃತಿ ವಿಕೋಪದ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ,ಸ್ಪಂದಿಸಬೇಕೆಂದು ಡಿಸಿ ಆದೇಶಿಸಿದ್ದಾರೆ.ಆದರೆ ಡಿಸಿ ಆದೇಶದ ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.ಚಿತ್ರದುರ್ಗದ ಗೋನೂರಿನಲ್ಲಿ ಶುಕ್ರವಾರ ರಾತ್ರಿ ಬಿದ್ದ ಬಾರಿ ಮಳೆಗೆ, ಬೇವಿನಮರ ಅಂಬೇಡ್ಕರ್ ನಾಮಫಲಕ ಹಾಗು ಗ್ರಾಮದ ಕುಡಿವ ನೀರಿನ ಕೊಳಾಯಿ ಮೇಲೆ ಬಿದ್ದಿದೆ.ಇದರಿಂದ ಕುಡಿವ ನೀರಿನ ಸಮಸ್ಯೆಯಾಗಿದೆ. ಮೂರು ದಿನಗಳು ಕಳೆದರೂ, ಬಿದ್ದಿರುವ ಮರ ತೆಗೆಸಿ ಸ್ವಚ್ಚತೆಗೆ ಮನವಿ ಮಾಡಿದರೂ,ಗೋನೂರು ಪಿಡಿಓ ಕೇರ್ ಮಾಡುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.