ಹೊಳಲ್ಕೆರೆಯ ಹಿರೇಕಂದವಾಡಿ ಗ್ರಾಮದಲ್ಲಿ 1 ಕೋಟಿ 25 ಲಕ್ಷ ರೂ.ವೆಚ್ಚದಲ್ಲಿ ನೂತನ ಆಶ್ರಯ ಲೇಔಟ್ ನಿರ್ಮಾಣ ಕಾಮಗಾರಿ ಸೇರಿದಂತೆ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಸಾನಿಧ್ಯದಲ್ಲಿ ಶಾಸಕ ಡಾ.ಎಂ.ಚಂದ್ಪಪ್ಪ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದರು. ಹಿರೇಕಂದವಾಡಿ ಗ್ರಾಮದಲ್ಲಿ 14 ಕೋಟಿ 36 ಲಕ್ಷ ರೂ.ವೆಚ್ಚದಲ್ಲಿ ತಣಿಗೆಹಳ್ಳಿಯಿಂದ ಬಿ.ದುರ್ಗ ಗ್ರಾಮಕ್ಕೆ ಸಿ.ಸಿ.ರಸ್ತೆ ಮತ್ತು ಸಿ.ಸಿ.ಚರಂಡಿ ನಿರ್ಮಾಣ ಕಾಮಗಾರಿ, 3 ಕೋಟಿ 89 ಲಕ್ಷ ರೂ.ವೆಚ್ಚದಲ್ಲಿ ಕೆರೆಬೊಮ್ಮಜ್ಜಿ ಹಳ್ಳಕ್ಕೆ ಚೆಕ್ಡ್ಯಾಂ ಮತ್ತು 2 ಕೆರೆ ಅಭಿವೃದ್ದಿ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು. ಈ ಸಮಯದಲ್ಲಿ
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಇನ್ನು ಅನೇಕರು ಉಪಸ್ಥಿತರಿದ್ದರು.