ಚಿತ್ರದುರ್ಗದ ಯುವ ಮುಖಂಡ ಪ್ರೇಮ್ ಸಾಗರ್ ಮನೆಗೆ ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಭೇಟಿ ನೀಡಿದರು. ಅವರು ಚಿತ್ರದುರ್ಗದ ತರಾಸು ರಂಗ ಮಂದಿರದಲ್ಲಿ ಆಯೋಜಿಸಿದ್ದ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಸಮಾವೇಶದಲ್ಲಿ ಭಾಗವಹಿಸಿ ಆ ನಂತರ ವೇಮನ ನಗರದ ಎರಡನೇ ಕ್ರಾಸ್ ನಲ್ಲಿರುವ ಪ್ರೇಮ್ ಸಾಗರ್ ಅವರ ಮನೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆ ಕಾಲ ವಿಶ್ರಾಂತಿ ಪಡೆದು ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಬಗ್ಗೆ ಚರ್ಚಿಸಿದರು. ಈ ಸಮಯದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ, ಶಾಸಕರಾದ ಬಸವಂತಪ್ಪ, ವಿರೇಂದ್ರ ಪಪ್ಪಿ, ಬಿಪಿ ಪ್ರೇಮ್ ನಾಥ್ ಮತ್ತು ಬಿಪಿ ತಿಪ್ಪೇಸ್ವಾಮಿ ಬಿಪಿ ಪ್ರೇಮ್ ಸಾಗರ್ ಇದ್ದರು.