ಎನ್ ಡಿಎ ಅಭ್ಯರ್ಥಿ ಪರ ಬಿಜೆಪಿಯಿಂದ ಭರ್ಜರಿ ಪ್ರಚಾರ

ರಾಜ್ಯ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂಗವಾಗಿ ಇಂದು ಚಿತ್ರದುರ್ಗದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ವೈ ನಾರಾಯಣಸ್ವಾಮಿ, ಪರವಾಗಿ ಚಿತ್ರದುರ್ಗ ನಗರ ಮಂಡಲದ ಪದಾಧಿಕಾರಿಗಳು ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಶಿಕ್ಷಕರ ಬಳಿ ನಾರಾಯಣಸ್ವಾಮಿ ಪರವಾಗಿ ಮತಯಾಚನೆ ಮಾಡಿದರು.

 

 

ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ.ಐಟಿಐ ಕಾಲೇಜು ವಾಸುದೇವ ರೆಡ್ಡಿ ಸ್ಮಾರಕ ಪ್ರೌಢಶಾಲೆ  ತಗ್ಗಿನಮಠ ಐಟಿಐ ಕಾಲೇಜು ಕೋಟೆ ಸರ್ಕಾರಿ ಪ್ರೌಢಶಾಲೆ ಸರ್ಕಾರಿ ಬಾಲಕಿಯರ  ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ,ಪಾಶ್ವನಾಥ ಶಾಲೆ ಶಾರದಾ ಪ್ರೌಢಶಾಲೆ ಕಬಿರಾನಂದ ಆಶ್ರಮದ ಶಾಲೆ.ರೋಟರಿ ಪ್ರೌಢಶಾಲೆ.ಅನುಪಮಾ ವಿದ್ಯಾಸಂಸ್ಥೆ  ರಾಘವೇಂದ್ರ ವಿದ್ಯಾ ಸಂಸ್ಥೆ ಸಿದ್ದರಾಮೇಶ್ವರ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಸಂದರ್ಭದಲ್ಲಿ ಚಿತ್ರದುರ್ಗ ನಗರ ಬಿಜೆಪಿ ಅಧ್ಯಕ್ಷರಾದ ಚಾಲುಕ್ಯ ನವೀನ್, ಜಿಲ್ಲಾ ಮಾಧ್ಯಮ ವಕ್ತಾರರಾದ  ನಾಗರಾಜ್ ಬೇಂದ್ರೆ, ನಗರಸಭಾ ಸದಸ್ಯರಾದ ಹರೀಶ್, ಉಪಾಧ್ಯಕ್ಷರಾದ ಬಸವೇಶ್, ಪಲ್ಲವಿ ಪ್ರಸನ್ನ, ಕೃಷ್ಣ ರಾಮಕೃಷ್ಣ, ಪರಶುರಾಮ್, ತಿಪ್ಪೇಸ್ವಾಮಿ, ಅರುಣ ಕುಮಾರಿ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *