ಜವನಗೊಂಡನಹಳ್ಳಿ ಪಿಡಿಒ ಸಿ. ಈಶ್ವರ್ ಅಮಾನತು

ರಾಜ್ಯ

ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2018 ಮತ್ತು 19 ರಿಂದ 22- 2023 ರವರೆಗೆ ಹಣಕಾಸು, ಕಾಮಗಾರಿ ಮತ್ತು ಕಂದಾಯಗಳ ಬಗ್ಗೆ ಅವ್ಯವಹಾರ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಿ ಈಶ್ವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್ ಜೆ ಸೋಮಶೇಖರ್ ಆದೇಶಿಸಿದ್ದಾರೆ.
ಜವನಗೊಂಡನಹಳ್ಳಿಯ ಶಶಿಕಾಂತ್ ಮತ್ತು ಹೆಚ್ ಎಂ ಭರತ್ ಎನ್ನುವವರು, ಪಂಚಾಯಿತಿಯಲ್ಲಿ ಕೆಲವು ಅಕ್ರಮಗಳು ‌ನಡೆದಿವೆ. ಅವುಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಾಖಲೆಗಳನ್ನು ನೀಡಿದ್ದು, ಅದರಂತೆ ತನಿಖೆ ನಡೆಸಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಈಶ್ವರ್ ಅವರಿಗೆ 2018-19 ರಿಂದ 2022-23 ರವರೆಗಿನ ಎಲ್ಲಾ ಹಣಕಾಸು, ಕಾಮಗಾರಿ ಕಂದಾಯ ಲೆಕ್ಕ ಶೀರ್ಷಿಕೆಯ ಎಲ್ಲಾ ದಾಖಲೆಗಳನ್ನು ‌ನೀಡುವಂತೆ ತಿಳಿಸಿದ್ದು,ಹಣಕಾಸು ಹಾಗು ಕಾಮಗಾರಿಗೆ ವೆಚ್ಚ ಮಾಡಿದ್ದ ಬಗ್ಗೆ ದಾಖಲೆಗಳನ್ನು ನೀಡಿಲ್ಲ. ಇದರಿಂದ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ‌ತೆಗೆದುಕೊಳ್ಳಬಹುದು ಎಂದು ವರದಿಯನ್ನು ನೀಡಿದ್ದು, ಅದರ ಆಧಾರದ ಮೇಲೆ ಪಿಡಿಓ ಅವರಿಗೆ ಸಮಜಾಯಿಷಿ ಕೇಳಿ ನೋಟಿಸ್ ನೀಡಿದ್ದರು, ಅದಕ್ಕೆ ಉತ್ತರಿಸಲು ಸಾಧ್ಯವಾಗದೆ ಇರುವುದರಿಂದ ಕರ್ತವ್ಯ ಲೋಪ ಎಸಗಿರುವುದರಿಂದ ಹಾಗು ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಅಮಾನತು ಮಾಡಿದ್ದೇವೆ ಎಂದು ಸಿಇಒ ಎಸ್ ಜೆ ಸೋಮಶೇಖರ್ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *