ಚಿತ್ರದುರ್ಗ: ನನ್ನನ್ನು ಕಡಿದರೂ ನಾನು ಹಿಂದುತ್ವ ವಾದಿಯೇ ನಾನು ಹಿಂದುತ್ವ ಬಿಟ್ಟುಕೊಡುವುದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಹೇಳಿದರು.
ಅವರು ಚಿತ್ರದುರ್ಗದ ಖಾಸಗಿ ಹೋಟೇಲ್ ನಲ್ಲಿಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಇದಕ್ಕಾಗಿಯೇ ನಾನು ಗೋವನ್ನು ಮತ್ತು ಹೆಣ್ಣನ್ನು ತಾಯಿ ಎಂದು ಕರೆಯುತ್ತಿರುವುದು. ಕುರುಬ ಜಾತಿಯೂ ಹಿಂದ್ವತಕ್ಕೆ ಸೇರಿದೆ ತಾನೆ, ಕೋಲಿ,ಉಪ್ಪಾರ ಇಂತಹ ಸಮಾಜಗಳು ಅರ್ಹತೆಯ ಪ್ರಕಾರ ಎಸ್ಟಿ ಗೆ ಸೇರಿದರೆ ತಪ್ಪೇನಿದೆ. ಸಿದ್ದರಾಮಯ್ಯ ರಾಜಕೀಯಕ್ಕಾಗಿ ಕುರುಬ ಎಂಬ ಪದ ಬಳಸಿಕೊಳ್ಳಬಹುದು ಅದರೆ ನಾನು ಆ ಪದ ಬಳಸಿಕೊಳ್ಳೋದಿಲ್ಲ. ಅಹಿಂದ ಪದವನ್ನು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿದ್ದಿರಿ, ನನ್ನ ಕ್ಷೇತ್ರದಲ್ಲಿ ಕುರುಬರು ಇದ್ದರೂ ನಾನು ಅವರನ್ನು ಮತ ಕೇಳೋದಿಲ್ಲ. ನನಗೆ ಹಿಂದುತ್ವದ ಮೇಲೆಯೇ ಮತವನ್ನು ಕೊಡುತ್ತಾರೆ. ಸಮಾಜದ ಸಮಾವೇಶಕ್ಕೆ ಬರುತ್ತೇನೆ ಎಂದರೆ ಸಿದ್ದರಾಮಯ್ಯ ಅವರನ್ನು ಕರೆಯಲು ತಯಾರಿದ್ದೇನೆ ಎಂದು ಹೇಳಿದರು.
ಸಂಯುಕ್ತವಾಣಿ