ಮೈಸೂರು: ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ
ಅಡಗೂರು ವಿಶ್ವನಾಥ್ ಅಪ್ತ ನೇರಳಕುಪ್ಪೆ ನವೀನ್ ಹಾಗೂ ಆತನ ಸ್ನೇಹಿತರು ವೈದ್ಯರೊಬ್ಬರ ಮೆಮೋರಿ ಚಿಪ್ ಕಳವು ಮಾಡಿ ಅದನ್ನು ಕೊಡಲು ಒಂದು ಕೋಟಿ ಡಿಮ್ಯಾಂಡ್ ಮಾಡಿದ ಆರೋಪಿಗಳು ಇದೀಗ ಕಂಬಿ ಹಿಂದಿದ್ದಾರೆ…
ಇಂತಹ ಪ್ರಕರಣವೊಂದು ಮೈಸೂರು ಜಿಲ್ಲೆಯಲ್ಲಿ ಹನಿಟ್ರಾಪ್ ಮೂಲಕ ಬಯಲಿಗೆ ಬಂದಿದೆ.
ಅಡಳಿತ ಪಕ್ಷವಾಗಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಅಪ್ತ ನೇರಳಕುಪ್ಪೆ ನವೀನ್ ಹಾಗೂ ಇತರರು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾಗಿರುವ ಬಾಬು ರಾವ್ ಪ್ರಕಾಶ್ ಅವರ ಮೊಬೈಲ್ ನಲ್ಲಿದ್ದ ಖಾಸಗಿ ವಿಡಿಯೋವಿದ್ದ ಮೆಮೋರಿ ಚಿಪ್ ಕದ್ದಿದ್ದಾರೆ. ಇದನ್ನಿಟ್ಟುಕೊಂಡು ಪಿರಿಯಾ ಪಟ್ಟಣದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಬಾಬುರಾವ್ ಪ್ರಕಾಶ್ ಅವರನ್ನ ಒಂದು ಕೋಟಿ ಹಣ ಕೊಡುವಂತೆ ಬ್ಲಾಕ್ ಮೇಲ್ ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಹೆದರಿ ಜನವರಿಯಿಂದ ಇಲ್ಲಿಯವರೆಗೆ ಆಸ್ತಿ ಮಾರಾಟ ಮಾಡಿ 27 ಲಕ್ಷ ನೀಡಿದ್ದರೂ ಮೆಮೋರಿ ಚಿಪ್ ನೀಡದೆ ಹಣಕ್ಕಾಗಿ ಬಿಡದೆ ಕಾಡುತ್ತಿದ್ದರು ನವೀನ್ ನೇರಳಕುಪ್ಪೆ ಹಾಗೂ ಸಹಚರರು. ಅಂತಿಮವಾಗಿ ಒಂದು ವರ್ಷದ ನಂತರ ವೈದ್ಯ ಬಾಬುರಾವ್ ಪ್ರಕಾಶ್ ಮೈಸೂರಿನ ಕುವೆಂಪು ನಗರ ಠಾಣೆಗೆ ದೂರು ನೀಡಿದ್ದಾರೆ.
ಪೋಲಿಸರು ಆರೋಪಿಗಳಾದ ನೇರಳಕುಪ್ಪೆ ನವೀನ್, ಶಿವರಾಜ್ ಆಲಿಯಾಸ್ ಸ್ನೇಕ್ ಶಿವರಾಜ್, ಹರೀಶ್ ಎಂಬುವರನ್ನು ಬಂಧಿಸಿದ್ದಾರೆ. ಅನಿತಾ, ವಿಜಿ ಹಾಗೂ ಇತರೇ ಆರೋಪಿಗಳಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.
ಸಂಯುಕ್ತವಾಣಿ