ಚಳ್ಳಕೆರೆ ಟೋಲ್ಗೇಟ್ ಸಮೀಪವಿರುವ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ, ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಸೋಮವಾರ ವಿಸರ್ಜಿಸಲಾಯಿತು.
ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಗಣಪತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡುತ್ತ ಗಣಪತಿಯನ್ನು ಏಕದಂತ, ವಿಘ್ನಗಳ ನಿವಾರಕ, ಕರಿಮುಖ ಗಣಪ, ವಕ್ರತುಂಡ ಹೀಗೆ ನಾನಾ ಹೆಸರುಗಳಿಂದ ಪೂಜಿಸಲಾಗುತ್ತದೆ. ಯಾವುದೇ ಶುಭ ಸಮಾರಂಭ ನಿರ್ವಿಘ್ನವಾಗಿ ನಡೆಯಬೇಕಾದರೆ ಮೊದಲ ಪೂಜೆ ಸಲ್ಲುವುದೇ ಗಣಪನಿಗೆ. ಹಾಗಾಗಿ ವಿನಾಯಕನನ್ನು ಶ್ರದ್ದಾಭಕ್ತಿಯಿಂದ ಪೂಜಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪರಿಸರವನ್ನು ಸ್ವಚ್ಚವಾಗಿ ಕಾಪಾಡಬೇಕಾಗಿರುವುದರಿಂದ ನಗರಸಭೆ ವಿಸರ್ಜನೆಗೆ ಎಲ್ಲೆಲ್ಲಿ ಸ್ಥಳ ನಿಗಧಿಪಡಿಸಿದೆಯೋ ಅಂತಹ ಕಡೆಯಲ್ಲೆ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕೆಂದು ಎಂ.ಸಿ.ರಘುಚಂದನ್ ಹೇಳಿದರು.
ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರು ವಿಸರ್ಜನೆಯಲ್ಲಿದ್ದರು.