ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎನ್ ಡಿಎ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ: ಯಾರಿಗೊಲಿಯಲಿದೆ ಅಧಿಕಾರ

ರಾಜ್ಯ

ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಇಂದು‌ ನಡೆಯಲಿದ್ದು, ಬಿಜೆಪಿ ಎನ್ ಡಿಎ ಒಕ್ಕೂಟದ ಅಭ್ಯರ್ಥಿಗಳು ಕಣದಲಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಕೂಡ ಪ್ರತಿ ತಂತ್ರಗಾರಿಕೆಯನ್ನು ಹೆಣೆದಿದೆ. ಕಾಂಗ್ರೆಸ್ ಮತ್ತು ಪಕ್ಷೇತರರು ಸಮಾನ ಮನಸ್ಕರಾದ ಜೆಡಿಎಸ್ ಸದಸ್ಯರನ್ನು ಸೇರಿಸಿಕೊಂಡು ನಗರಸಭೆ ಗಾಧಿಗೆಯನ್ನು ಹಿಡಿಯಲು ಹೊರಟಿದೆ. ನಗರಸಭೆಯಲ್ಲಿ 15 ಬಿಜೆಪಿ ಹಾಗೂ 3 ಜೆಡಿಎಸ್ ಮತ್ತು ಸಂಸದರ ಮತಗಳಿದ್ದು, ಒಟ್ಟು 19 ಮತಗಳು ಬಿಜೆಪಿ‌ ಪರವಾಗಿವೆ. ಇನ್ನು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ತಾರಕೇಶ್ವರಿ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ರೋಹಿಣಿ ಕಣದಲ್ಲಿದ್ದಾರೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರಾರ ಈರುಳ್ಳಿ ರಮೇಶ್ ಕಣದಲಿದ್ದಾರೆ. ಕಾಂಗ್ರೆಸ್ 4, ಪಕ್ಷೇತರ 6 ಮತ್ತು ಜೆಡಿಎಸ್ ನ 4 ಸದಸ್ಯರನ್ನು ಸೆಳೆದುಕೊಳ್ಳುವ ಜೊತೆಗೆ ಅಸಮಾಧಾನಗೊಂಡ ಬಿಜೆಪಿಯ 6 ಜನ ಸದಸ್ಯರನ್ನು ಸೆಳೆದುಕೊಂಡರೆ ಸೇರಿ ಶಾಸಕ ಒಬ್ಬರು ಒಟ್ಟು 22 ಬಲವಿದೆ, ಒಟ್ಟಾರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವು ಎನ್ ಡಿ ಎ ಮೈತ್ರಿ ಕೂಟಕ್ಕೆ ಟಕ್ಕರ್ ಕೊಟ್ಟು ಅಧಿಕಾರ ಹಿಡಿಯಲು ಸನ್ನದ್ಧವಾಗಿದೆ. ಒಟ್ಟಾರೆ ಕಾಂಗ್ರೆಸ್ ಮತ್ತು ಎನ್ ಡಿ ಎ ನಡುವೆ ಬಾರೀ ಪೈಪೋಟಿಯಂತು ಕಂಡು ಬರಲಿದೆ.

 

 

Leave a Reply

Your email address will not be published. Required fields are marked *