ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ ಖಂಡಿಸಿ ರೈತ ಸಂಘಟನೆ ಪ್ರತಿಭಟನೆ

ರಾಜ್ಯ

ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯ ಪ್ರಭು ಖಡಕ್ ಅಧಿಕಾರಿ, ಯಾರಿಗೂ ಜಗ್ಗದೆ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದು, ಕಾನೂನಿ ಚೌಕಟ್ಟಿನೊಳಗೆ ಎಲ್ಲವ‌ನ್ನು ಮಟ್ಟ ಹಾಕಿ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ ಎನ್ನುವ ಮಾತುಗಳು ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಇಂತಹ ಅಧಿಕಾರಿಯನ್ನು ಏಕಾಏಕಿ‌ ಸರ್ಕಾರ ವರ್ಗಾವಣೆ ಮಾಡಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ  ರೈತ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯಪ್ರಭು ಅವರ ವರ್ಗಾವಣೆ ಖಂಡಿಸುವುದರ ಜೊತೆಗೆ ರದ್ದು ಮಾಡುವಂತೆ ಒತ್ತಾಯಿಸಿ  ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಯನ್ನು ಆರಂಭಿಸಿವೆ.  ಅಧಿಕಾರಿಗಳಿಗೆ ಹಾಗೂ ಆಡಳಿತಕ್ಕೆ ಬಿಸಿ‌ ಮುಟ್ಟಿಸಿ  ಆಡಳಿತ ಚುರುಕಿನೊಂದಿಗೆ ಸಾಗುವಂತೆ ಮಾಡಿದ್ದು, ಇಂತಹ ಅಧಿಕಾರಿ ಜಿಲ್ಲೆಗೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ನಿಂತಿವೆ.

 

 

Leave a Reply

Your email address will not be published. Required fields are marked *