ಡಿಟಿ ಶ್ರೀನಿವಾಸ್ ಗೆಲುವಿಗೆ ಚಳ್ಳಕೆರೆಯಲ್ಲಿ ಕಾಡುಗೊಲ್ಲರ ಸಂಭ್ರಮಾಚರಣೆ

ರಾಜ್ಯ

 

ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಚುನಾವಣೆಯಲ್ಲಿ ಜಯಗಳಿಸಿದ ಪ್ರಯುಕ್ತ
ಚಳ್ಳಕೆರೆ ಶಿಕ್ಷಕರು ಕಾಡುಗೊಲ್ಲರ ಸಮುದಾಯದ ಹಾಗೂ ಕಾಂಗ್ರೇಸ್ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚ ಸಂಭ್ರಮಾಚರಣೆ ಮಾಡಲಾಯಿತು..
ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿ ರವರ ಸಮ್ಮುಖದಲ್ಲಿ ಚಳ್ಳಕೆರೆ ನಗರದ ವಾಲ್ಮೀಕಿ ಸರ್ಕಲ್ ಮುಂಭಾಗ ಕಾಂಗ್ರೇಸ್ ಮುಖಂಡರು ಸಿಹಿ ಹಂಚಿ ಪಟಾಕಿ ಸಿಡಿಸಲಾಯಿತು.

 

 

ಇದೇ ಸಂದರ್ಭದಲ್ಲಿ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ರವರ ಜಯಕ್ಕೆ ಶ್ರಮಿಸಿದ ಚಳ್ಳಕೆರೆ ಶಾಸಕರಾದ ಟಿ. ರಘಮೂರ್ತಿ ಸಮುದಾಯದ ಮುಖಂಡರು ನಿವೃತ ಶಿಕ್ಷಕರು ಹಾಗೂ ಶಿಕ್ಷಕರು ಹೂ ಮಾಲೆ ಹಾಕಿ ಅಭಿನಂದನೆ ಸಲ್ಲಿಸಿದರು.

ಈ ಸಮಯದಲ್ಲಿ ಪರಶುರಾಮಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಿಟಿ ಶಶಿಧರ್,ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ವೀರಭದ್ರಪ್ಪ, ನಗರಸಭೆ ನಾಮ ನಿರ್ದೇಶತ ಸದಸ್ಯರಾದ ನೇತಾಜಿ ಪ್ರಸನ್ನ, ಅನ್ವರ್ ಸಾಬ್, ನಟರಾಜು ವೀರಭದ್ರಪ್ಪ, ನಿವೃತ್ತ ಪ್ರಾಚಾರ್ಯ ಮೂಡಲಗಿರಿಯಪ್ಪ, ನಿವೃತ್ತ ಮುಖ್ಯ ಶಿಕ್ಷಕ ಮಂಜಣ್ಣ, ಶ್ರೀಕಂಠಪ್ಪ ನಿವೃತ್ತ ಉಪನ್ಯಾಸಕ ಲಕ್ಷ್ಮಣ್, ವಿಶ್ವಭಾರತಿ ಮುಖ್ಯ ಶಿಕ್ಷಕರಾದ ಜಿ.ಟಿ.ವೀರಭದ್ರಸ್ವಾಮಿ ,ಸಿದ್ದಲಿಂಗಪ್ಪ ,ಶ್ರೀನಿವಾಸ್ ,ಓಬಣ್ಣ,ನಾಗರಾಜ್, ಮಂಜುನಾಯ್ಕ್ ನನ್ನಿವಾಳ ಓಬಣ್ಣ, ನಿವೃತ್ತ ಶಿಕ್ಷಕರು ಉಪನ್ಯಾಸಕರು ಕಾಡುಗೊಲ್ಲ ಮುಖಂಡರು ಇದ್ದರು.

Leave a Reply

Your email address will not be published. Required fields are marked *