ಯಡಿಯೂರಪ್ಪ ಅವರ ನಾಲಿಗೆ ಗೆ ಹಿಡಿತವಿಲ್ಲ

ರಾಜ್ಯ

ಶ್ರೀರಾಮುಲು ಅವರಿಗೆ ಯಾತ್ರೆಯ ಯಶಸ್ಸು‌ ನೋಡಿ ಏನು ಮಾಡಬೇಕು ಎಂದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಗುಂಡೂ ರಾವ್ ಹೇಳಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ದೊಡ್ಡ ಬಳ್ಳಾಪುರದಲ್ಲಿ ಕೋಟಿ ಕೋಟಿ ಖರ್ಚು ಮಾಡಿ‌ ಸಮಾವೇಶ ಮಾಡಿದರೂ ಜನರಿರಲಿಲ್ಲ, ಈಗ ನಮ್ಮ‌ಯಶಸ್ಸು ನೋಡಿ‌ ಸಹಿಸಲಾಗುತ್ತಿಲ್ಲ, ಯಡಿಯೂರಪ್ಪ ಹಿರಿಯ ರಾಜಕಾರಣಿ, ರಾಜಕೀಯ ಟೀಕೆ ಮಾಡಬೇಕು ಅವರಿಗೆ ನಾಲಿಗೆ ಮೇಲೆ‌ ಹಿಡಿತವಿಲ್ಲ, ಮಾಜಿ‌ ಸಿಎಂ ಆಗಿ ಈ ರೀತಿಯ ಹೇಳಿಕೆ ಕರ್ನಾಟಕ ಸಂಸ್ಕೃತಿಗೆ ಗೌರವ ಶೋಭೆ ತರಲ್ಲ ಅವರ ಹಗರಣಗಳು ಬಹಿರಂಗವಾಗಿವೆ. ನಮ್ಮನ್ನು ಅಧಿಕಾರ ಹಿಡಿದುಕೊಂಡು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ,ನಿತ್ಯವೂ ಸಿದ್ದರಾಮಯ್ಯ ಜಪ‌ ಮಾಡುತ್ತಿದ್ದಾರೆ. ಜನರ ವಿಶಸ್ವಾಸ ಗಳಿಸಲು ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ, ಈ ರೀತಿತ ಟೀಕೆಗಲಿಗೆ ನಾವು ಜಗ್ಗಲ್ಲ ಪರಿಶಿಷ್ಟರ ಮನೆ ಭೇಟಿ ಇದೊಂದು‌ ನಾಟಕ ಎಂದರು.ರಾಜ್ಯದಲ್ಲಿ ಆಡಳಿತ ಎಷ್ಟು ಹದಗೆಟ್ಟಿದೆ ಎಂದು ಜನ ನೋಡುತ್ತಿದ್ದಾರೆ. ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಿದರೆ ಸ್ವಾಗತ ಮಾಡೋಣ, ಹಿಂದೆ ಯಡಿಯೂರಪ್ಪ ಅವರು ವಾಸ್ತವ್ಯ ಮಾಡಿದಾಗ ಅವರು ರೆಡಿಮೇಡ್ ಊಟ ಮಾಡಿದ್ದರು, ಆಗ ಅವರಿಗೆ ಜನರ ಮೇಲೆ ಕಳಕಳಿ‌ ಬದ್ದತೆ ಇರಬೇಕಿತ್ತು, ಬಿಜೆಪಿ ನಾಯಕರ ಕೈಯಲ್ಲಿ ಪೂರ್ತಿ ಅಧಿಕಾರವಿದೆ. ಬಿಜೆಪಿ ವಿರುದ್ಧ ನಿಲ್ಲುವ ಕೈ ನಾಯಕರ ವಿರುದ್ದ ಇಡಿ ಐಟಿ ದಾಳಿ ಮಾಡುತ್ತಿದ್ದಾರೆ. ಮೋದಿ ಬಗ್ಗೆ ಮಾತನಾಡಬೇಡಿ ಹೇಳಿ‌ದಮ್ಕಿ ಹಾಕುತ್ತಾರೆ. ಮೂರಿ ವರ್ಷದಿಂದ ಡಿಕೆಶಿ ಮೇಲೆ ಇಡಿ‌ ಮತ್ತು ಐಟಿ ಯವರು ಹಿಂದೆ ಬಿದ್ದಿದ್ದಾರೆ. ದೇಶದ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ತನ್ನ ಕೈಗೆ ತೆಗೆದುಕೊಳ್ಳುವ ಯತ್ನ ಮಾಡುತ್ತಿದೆ ಎಂದು ಅರೋಪಿಸಿದರು.

 

 

Leave a Reply

Your email address will not be published. Required fields are marked *