ಹಿರಿಯೂರು ನಗರದ ಪುರಾತನ ಸುಪ್ರಸಿದ್ಧ ಶ್ರೀ ಮುರುಗನ್ ವೆಳ್ಳಿ ದೇವಾನೈ ದೇವಾಲಯದಲ್ಲಿ ಪ್ರತಿವರ್ಷದಂತೆ ಆಶಾಡ ಮಾಸದ ಆಡಿ ಕಾವಡಿ ಪೂಜಾ ಕಾರ್ಯಕ್ರಮ ಭಕ್ತಿ ಭಾವದಿಂದ ಜರುಗಿತು.ಇದರ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಂತರ ನಗರದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಿತು.
ದಾರಿಯುದ್ದಕ್ಕೂ ಉಪವಾಸ ನಿರತ ಭಕ್ತರು ಕಾವಡಿಗಳನ್ನು ಹಿಡಿದು ದೇವರ ನಾಮಸ್ಮರಣೆ ಮಾಡುತ್ತಾ ಕುಣಿದು ಕುಪ್ಪಳಿಸುತ್ತಾ ಸಾಗಿ ಬಂದರು. ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಸುದ್ದಿ ಹಾಗೂ ಜಾಹೀರಾತಿಗೆ ಸಂಪರ್ಕಿಸಿ: 8660924503