ಗೂಗಲ್ ಮೀಟ್ ನಲ್ಲಿ ಉಪನ್ಯಾಸ ಮಾಲೆ

ಜಿಲ್ಲಾ ಸುದ್ದಿ

ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರ ಹಾಗೂ ಸಂಶೋಧಕರ ವೇದಿಕೆ ಕಮಲಾಪುರ, ಶ್ರೀ ವಿಶ್ವ ಕರ್ಮ ಸಮಾಜ ವಿಕಾಸ ಸಂಸ್ಥೆ,ಉತ್ತರ ಕರ್ನಾಟಕ ವಿಶ್ವ ಕರ್ಮ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಡಾ ವಿರೇಶ್ ಬಡಿಗೇರ ಅವರ ಪರಿಕಲ್ಪನೆಯ ಹೇಳತೇನ ಕೇಳ 112 ಉಪನ್ಯಾಸ ಮಾಲೆಯು ಗೂಗಲ್ ಮೀಟ್ ನಲ್ಲಿ 21-08-22 ರಂದು ಸಂಜೆ ಐದು ಗಂಟೆಗೆ ನಡೆಯಲಿದೆ.
ಉಪನ್ಯಾಸ ಮಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ. ರಾಮಚಂದ್ರ ಗು. ಅರ್ಕಸಾಲಿ ವಿಷಯಕ್ಕೆ ಸಂಬಂಧಿಸಿದಂತೆ ರಂಗಭೂಮಿ ನೇಪಥ್ಯ ಕಲಾವಿದ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಂಕರ್ ಕೆ. ಆರ್ಕಸಾಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಗಳಗಿ ತಾಲೂಕಿನ ಬಯಲಾಟ ಕವಿಗಳು ಮತ್ತು ನಿರ್ದೇಶಕರಾದ ಎಂ. ಎಸ್ ಮಾಳವಾಡ ವಹಿಸಲಿದ್ದಾರೆ. ಪ್ರಾಸ್ತಾವಿಕ ಮಾತುಗಳನ್ನು ಹೇಳತೇನ ಕೇಳ ಉಪನ್ಯಾಸ ಮಾಲೆಯ ಸಂಚಾಲಕ ಡಾ.ಲಕ್ಷ್ಮಿ ಕಾಂತ ಪಾಂಜಾಳ ಆಡಲಿದ್ದಾರೆ. ಕುಮಾರ ವಿನ್ಯಾಸ ಬಡಿಗೇರ ಹಾಗೂ ಅಪೇಕ್ಷ ಬಡಿಗೇರ ಅವರು ತಾಂತ್ರಿಕ ನಿರ್ವಹಣೆ ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದೆ

 

 

Leave a Reply

Your email address will not be published. Required fields are marked *