ಕುಡಿದ ಅಮಲಿನಲ್ಲಿ ಜವರಾಯನ ಪಾದ ಸೇರಿದ ಯುವಕರು

ರಾಜ್ಯ

ಕುಡಿದ ಅಮಲಿನಲ್ಲಿ ಬೈಕ್ ಹಳ್ಳ ದಾಟಲು ಹೋಗಿ‌ ಇಬ್ಬರು ನೀರು ಪಾಲಾಗಿರುವ ಘಟನೆ ಪರುಶುರಾಂಪುರ ಹೋಬಳಿಯ ಕೊರ್ಲಕುಂಟೆ ಗ್ರಾಮದ ಹಳ್ಳದಲ್ಲಿ ನಡೆದಿದೆ.

 

 


ಮೂರು ಜನರು ಸೋಮವಾರ ಪಾರ್ಟಿಯನ್ನು ಮಾಡಿ ಕುಡಿದಿದ್ದಾರೆ. ನಂತರ ಬೈಕ್ ಹತ್ತಿ ಮೂರು ಜನರು ಕೂಡ ಹಳ್ಳ ದಾಟಿ ಮೋಜು ಮಾಡಲು ಹೊರಟಿದ್ದಾರೆ. ಆದರೆ ವಿಧಿಯಾಟ ಬೇರೆಯಾಗಿತ್ತು. ಮೂವರಲ್ಲಿ ಒಬ್ಬ ಮಾತ್ರ ಬೈಕ್ ಹಾರಿ ಜೀವ ಉಳಿಸಿಕೊಂಡಿದ್ದಾನೆ. ಆದರೆ ದುರ್ವಿಧಿ ಕೊರ್ಲಕುಂಟೆ ಗ್ರಾಮದ ಕುಮಾರ್ ಮತ್ತು ಓಬಳೇಶ್ ಇಬ್ಬರನ್ನು ನೀರಿನ ಮೂಲಕ ಜವರಾಯ ಅಪ್ಪಿಕೊಂಡಿದ್ದು,ಇಬ್ಬರು ಯುವಕರಿಗಾಗಿ ಪೊಲೀಸರು ಹಾಗೂ ಗ್ರಾಮಸ್ಥರು ಶೋಧ ನಡೆಸಿದ್ದು, ಇಡೀ ಗ್ರಾಮದಲ್ಲಿ‌ ಆತಂಕ ಮನೆ ಮಾಡಿದೆ.

Leave a Reply

Your email address will not be published. Required fields are marked *