ಚಿತ್ರದುರ್ಗದ ಶ್ರೀ ಶ್ರೀ ಶ್ರೀ ಶನೇಶ್ವರ ಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ನ ಪೀಠಾಧಿಪತಿಗಳಾದ ಶ್ರೀ ಶ್ರೀ ಮೋಹನಕುಮಾರ ಸ್ವಾಮಿಜೀಯವರು, ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇವರಿಗೆ ಪತ್ನಿ, ಎರಡು ಹೆಣ್ಣು ಮತ್ತು ಪುತ್ರನಿದ್ದಾನೆ. ಇವರು ನಿತ್ಯ ವಾಣಿ ಪತ್ರಿಕೆಯ ಸಂಪಾದಕರ ನವೀನ್ ಅವರ ಹಿರಿಯ ಸಹೋದರರಾಗಿದ್ದಾರೆ. ಭಕ್ತರ ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಐಯುಡಿಪಿ ಬಡಾವಣೆಯಲ್ಲಿನ ನವೀನ್ ಅವರ ಮನೆಯ ಬಳಿ ಏರ್ಪಡಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.