ಮೇಕೆ ದಾಟು ಯೋಜನೆ ಅಣೆಕಟ್ಟು ನಿರ್ಮಾಣ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದೂಡಿದೆ.
ಮೇಕೆ ದಾಟು ಯೋಜನೆಯ ಅಣೆಕಟ್ಟು ವಿಚಾರಣೆ ವೇಳೆ ತಮಿಳು ನಾಡು ಅಕ್ಷೇಪವೆತ್ತಿದ್ದು, ಹೆಚ್ಚುವರಿ ಲಿಖಿತ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.
ಇದಕ್ಕೆ ಉತ್ತರಿಸಲು ಸಮಯಾವಕಾಶ ಬೇಕು ಎಂದು ಕರ್ನಾಟಕ ಪರ ವಕೀಲ ಶಾಮ್ ದಿವಾನ್ ವಾದ ಮಂಡಿಸಿದ್ದಾರೆ. ಅರ್ಜಿಯ ಅಂತಿಮ ವಿಚಾರಣೆ ವೇಳೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮೇಕೆದಾಟು ಅರ್ಜಿ ವಿಚಾರಣೆ ಹಂತದಲ್ಲಿದ್ದು, ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ಮತ್ತೆ ಚರ್ಚೆಯಾಗಬಾರದು ಎಂದು ಹೇಳುವ ಮೂಲಕ ಆಗಸ್ಟ್ 10 ಕ್ಕೆ ವಿಚಾರಣೆಯನ್ನು ಮುಂದೂಡಿದೆ.