ಪೆಟ್ರೋಲ್ ಕದಿಯುತ್ತಿದ್ದನ್ನು ನೋಡಿದ್ದಕ್ಕೆ ಚಾಕುವಿನಿಂದ ತಿವಿದ

ಕ್ರೈಂ

ಬೈಕ್ ನಿಂದ ಪೆಟ್ರೋಲ್ ಕದಿಯುತ್ತಿದ್ದ ಕಳ್ಳನನ್ನು ನೋಡಿದ್ದಕ್ಕೆ ವೃದ್ದನೊಬ್ಬನಿಗೆ ಕುತ್ತಿ ಭಾಗಕ್ಕೆ  ತಲೆ ಮತ್ತು ಭುಜಕ್ಕೆ ಚಾಕುವಿನಿಂದ ದಾಳಿ ನಡೆಸಿ ಕೊಯ್ದ ಘಟನೆ ಚಿತ್ರದುರ್ಗದ ರಂಗಾಪುರ ಗ್ರಾಮದಲ್ಲಿ‌ ನಡೆದಿದೆ.
ಗ್ರಾಮದ ಹೊರ ಭಾಗದಲ್ಲಿ ಕಳ್ಳತನಕ್ಕೆ ಹೊಂಚು ಹಾಕಿ‌ ಕುಳಿತಿದ್ದ ವೇಳೆ ಘಟನೆ ನಡೆದಿದೆ.
ವೃದ್ದ ಗಾಯಾಳು ಓಬಣ್ಣನನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆರೋಪಿಯು ವೃದ್ದನ ಮೇಲೆ ಚಾಕುವಿನಿಂದ ದಾಳಿ ನಡೆಸಿದ‌ ಮೇಲೆ ಪೊದೆಯೊಳಗೆ ಅಡಗಿ ಕುಳಿತಿದ್ದು, ಈತನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ದಾವಣಗೆರೆ ಜಿಲ್ಲೆಯ ಮಾಯಕೊಂಡ ಮೂಲಕ ವಸಂತ್ ನಾಯ್ಕ್ ಎಂದು ಗುರುತಿಸಲಾಗಿದ್ದು, ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

Leave a Reply

Your email address will not be published. Required fields are marked *