ಗಾಂಜಾ ಇದೆಯಾ ಅಂದವರು ಮಾಡಿದ್ದೇನು ?

ಕ್ರೈಂ

ಪೊಲೀಸರಂತೆ ವೇಷ ಹಾಕಿದ ಇಬ್ಬರೂ ದುಷ್ಕರ್ಮಿಗಳು ಸಾವಿರಾರು ನಗದು ಹಣ ಎಗರಿಸಿರುವ ಘಟನೆ ನಡೆದಿದೆ.

 

 

ಚಿತ್ರದುರ್ಗ ತಾಲೂಕಿನ ಹಾಯ್ಕಲ್ ಸಮೀಪ ನಾಯಕನಹಟ್ಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹಾಯ್ಕಲ್ ಗ್ರಾಮದ ತಿಪ್ಪಯ್ಯ (78) ಹಣ ಕಳೆದುಕೊಂಡ ವ್ಯಕ್ತಿ. ತಮ್ಮ ಜಮೀನಿಗೆ ತೆರಳುತ್ತಿದ್ದ ವೇಳೆ ವೃದ್ದನನ್ನ ಪೊಲೀಸರ ವೇಷದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು, ಗಾಂಜಾ ಪರಿಶೀಲನೆ ಮಾಡುತ್ತೇವೆ ಎಂದು ಜೇಬು ಚೆಕ್ ಮಾಡುವ ನೆಪದಲ್ಲಿ , ಜೇಬಿನಲ್ಲಿದ್ದ 37 ಸಾವಿರ ಹಣ ಎಗರಿಸಿ ಪರಾರಿಯಾಗಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ತುರುವನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುದ್ದಿಗಾಗಿ ಸಂಪರ್ಕಿಸಿ: _8660924503

Leave a Reply

Your email address will not be published. Required fields are marked *