ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ರಾಜ್ಯ ಸರ್ಕಾರವು ಇಂದಿನಿಂದ ನಂದಿನಿ ಹಾಲಿನ ಉತ್ಪನ್ನಗಳಾದ ಮೊಸರು ಮಜ್ಜಿಗೆ ಮತ್ತು ಲಸ್ಸಿಗಳ ಮೇಲಿನ ದರವನ್ನು ಹೆಚ್ಚು ಮಾಡಿ ಆದೇಶಿಸಿತ್ತು
ಆದರೆ ಮತ್ತೆ ಸರ್ಕಾರವೂ ಮೇಲಿನ ಎಲ್ಲಾ ಉತ್ಪನ್ನಗಳ ಬೆಲೆಯಲ್ಲಿ ಕೊಂಚ ಕಡಿಮೆ ಮಾಡಿ ಆದೇಶವನ್ನು ನೀಡುವ ಮೂಲಕ ಸಂತಸದ ಸುದ್ದಿಯನ್ನು ನೀಡಿದೆ.
ಕೇಂದ್ರ ಸರ್ಕಾರದ ವಿತ್ತ ಸಚಿವಾಲಯವು ಇಂದಿನಿಂದ ಜಾರಿಗೆ ಬರುವಂತೆ ಕರ್ನಾಟಕ ಹಾಲು ಮಹಾ ಮಂಡಳದ ಉತ್ಪನ್ನಗಳಾದ ಹಾಲು ಮೊಸರು ಮಜ್ಜಿಗೆ ಮತ್ತು ಲಸ್ಸಿಗಳ ಬೆಲೆಗೆ ಜಿಎಸ್ ಟಿ ವಿಧಿಸಿ ಅದರಂತೆ ದರವನ್ನು ಪರಿಷ್ಕರಣೆ ಮಾಡಿತ್ತು. ಆದರೆ ಇದಕ್ಕಿದ್ದಂತೆ ಈ ಆದೇಶದಲ್ಲಿ ಉತ್ಪನ್ನಗಳ ಮೇಲೆ ಕೊಂಚ ರಿಯಾಯಿತಿ ತೋರಿ ಗ್ರಾಹಕರ ಹಿತ ದೃಷ್ಟಿ ಯಿಂದ ಬೆಲೆಯಲ್ಲಿ ಕಡಿಮೆ ಮಾಡಿದೆ.