ಚಿತ್ರದುರ್ಗ ಮುರುಘಾಶ್ರೀಗಳ ಮೇಲಿನ ಲೈಂಗಿಕ ಆರೋಪದ ಹೇಳಿಕೆ ನಿನ್ನೆಯಷ್ಟೆ ಮುಗಿದಿದ್ದು, ಇದರ ಬೆನ್ನ ಹಿಂದೆಯೇ ಮಠದ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ವಿರುದ್ದದ ಕೌಂಟರ್ ಕೇಸ್ ಗೆ ಸಂಭಂಧಿಸಿದಂತೆ ಮಠದ ಒಳಭಾಗದ ವಿದ್ಯಾರ್ಥಿ ನಿಲಯಕ್ಕೆ ತನಿಖಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಪೊಲೀಸರ ತಂಡ ಆಗಮಿಸಿ ಪರಿಶೀಲನೆ ನಡೆಸಿತು.ನಂತರ ಮುರುಘಾ ಮಠದ ವಸತಿ ನಿಲಯಕ್ಕೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಾಧೀಶರಾದ ಬಿವಿ ಗಿರೀಶ್ ಅವರು ಆಗಮಿಸಿ ಸ್ಥಳ ಪರಿಶೀಲಿಸಿದರು. ನಂತರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಓ. ಪರಮೇಶ್ವರಪ್ಪ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಹಾಗೂ ಸೌಭಾಗ್ಯ ಬಸವರಾಜನ್ ವಿರುದ್ಧ ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ವಾರ್ಡ್ನ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ ಎಂದು ದೂರು ದಾಖಲಿಸಿದ್ದರು.