ಇಂದು ಮುರುಘಾ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುರುಘಾ ಶರಣರಿಂದ ಇಷ್ಟ ಲಿಂಗ ಧೀಕ್ಷೆ ಪಡೆದು ತಮ್ಮ ಕೊರಳಿಗೆ ಲಿಂಗ ಧರಿಸಿ ವಿಭೂತಿ ಹಚ್ಚಿಕೊಂಡರು.
ಇಂದು ಮುರುಘಾ ಮಠದಲ್ಲಿನ ಸ್ವಾಮೀಜಿಗಳೊಂದಿಗಿನ ಸಂವಾದದಲ್ಲಿ ಬಸವ ತತ್ವ ಪರಿ ಪಾಲನೆಯ ವಾಗ್ದಾನ ಮಾಡಿದರು.ಲಿಂಗ ಪೂಜೆ ವಿಧಿ ವಿಧಾನದ ತರಬೇತಿ ನೀಡಲು ತಮ್ಮೊಂದಿಗೆ ಮಠದ ಪ್ರತಿನಿಧಿಯೊಬ್ಬರನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದರು. ರಾಹುಲ್ ಗಾಂಧಿ ಮಠದ ಪರಂಪರೆಯ ಮಾಹಿತಿಯನ್ನು ಪಡರದರು. ಕಾಯಕ ಪ್ರಜ್ಞೆ ಮತ್ತು ಬಸವ ತತ್ವದ ಬಗ್ಗೆ ವಿವರಿಸಲಾಯಿತು. ಇಷ್ಟ ಲಿಂಗವನ್ನು ಕೈಲಿ ಹಿಡಿದು ಪ್ರಾತ್ಯಕ್ಷಿಕೆ ತೋರಿಸಿದೆವು.ಇದರಿಂದ ಪ್ರೇರಣೆಗೊಂಡ ಅವರು ಲಿಂಗದೀಕ್ಷೆ ಪಡೆಯು ಇಚ್ಚೆ ವ್ಯಕ್ತಪಡಿಸಿದರು. ಎಂದು ಮಾದ್ಯಮಗಳಿಗೆ ಮುರುಘಾ ಶರಣರು ಮಾಹಿತಿ ನೀಡಿದರು.ಲಿಂಗ ಪೂಜೆಯ ಮೂರು ಹಂತಗಳನ್ನು ವಿವರಿಸಿದೆವು.ಲಿಂಗವನ್ನು ಧಾರಣೆ ಮಾಡಿಕೊಂಡು ವಿಭೂತಿ ಧರಿಸಿದರು. ಬಸವ ತತ್ವ ಪಾಲನೆ ಮಾಡುವುದಾಗಿ ಸ್ವಯಂ ಪ್ರೇರಣೆಯಿಂದ ವಾಗ್ದಾನ ಮಾಡಿದ್ದಾರೆ ಎಂದರು.
ಈ ಸಮಯದಲ್ಲಿ ಶ್ರಿ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಷಡಕ್ಷರಮುನಿ ಸ್ವಾಮೀಜಿ, ಬಸವ ಪ್ರಭು ಸ್ವಾಮೀಜಿ ಇದ್ದರು