ಅಮಾಯಕ ಯುವಕನನ್ನು ನಾಯಿವ ಕಟ್ಟುವಂತೆ ಸರಪಳಿಯಲ್ಲಿ ಅಮಾನುಷವಾಗಿ ಕಟ್ಟಿ ಹಾಕಿ ಥಳಿಸಿರುವ ಘಟನೆ ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಠಾಣಾ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಉಮೇಶ್ ಎಂಬುವರ ಕುಟುಂಬ ತನ್ನ ಅಳಿಯನನ್ನೆ ಬಂಧಿಸಿಟ್ಟು ನಾಯಿ ಕಟ್ಟುವಂತೆ ಕಾಲಿಗೆ ಸರಪಳಿ ಹಾಕಿದ್ದು ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಈ ಯುವಕನ ಹೆಸರು ರಂಗನಾಥ, ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯಲ್ಲಿ ವಾಸವಿದ್ದ ಕಳವಿಭಾಗಿ ರಂಗನಾಥ ಬೆಂಗಳೂರಿನಲ್ಲಿ ಉತ್ತಮ ದುಡಿಮೆ ಮಾಡುತ್ತಾ ಸುಖವಾಗಿದ್ದ ಆದರೆ ಕೋವಿಡ್ ನಂತರ
ಹರ್ತಿಕೋಟೆಯಲ್ಲಿ ವಾಸವಿದ್ದ ಕಳವಿಭಾಗಿ ರಂಗನಾಥನಿಗೆ ಹೊಸಹಳ್ಳಿಯ ಉಮೇಶ್ ನ ಮಗಳು ಅಮೃತ. ಕೊಟ್ಟು ಮದುವೆ ಮಾಡಲಾಗಿತ್ತು. ಅದ್ಯಾಕೋ ತವರು ಮನೆ ಹೊಸಹಳ್ಳಿ ಸೇರಿದ್ದರಿಂದ. ಅಮೃತ ಗಂಡನಿಂದ ದೂರವಿದ್ದಳು. ಆಗ ಅಮಾಯಕ ರಂಗನಾಥ ಕುಡಿತಕ್ಕೆ ದಾಸನಾಗಿದ್ದ ಅಲ್ಲದೆ ಮಾವ ಉತ್ತಮಸ್ಥ ನಾದರೂ ಊರಲ್ಲಿ ಅನ್ನ ಆಹಾರ ಇಲ್ಲದೆ ಅಲೆಯುತ್ತಿದ್ದ ದಿಡೀರ್ ಎಂದು ಮಾವ ಉಮೇಶ್ ಮತ್ತು ಹೆಂಡತಿ ಅಮೃತ ಮತ್ತು ಕುಟುಂಬಸ್ತರು. ಇವನನ್ನು ಸರಪಳಿ ಹಾಕಿ ಬಂಧಿಸಿದ್ದಾರೆ.ಅನ್ನ ಹಾಕದೆ ಉಪವಾಸ ಕೂರಿಸಿದ್ದು, ಮಾಹಿತಿ ತಿಳಿಸಿದ ಗ್ರಾಮಸ್ಥರು. ಅಬ್ಬಿನಹೊಳೆ ಪೊಲೀಸರು, ವಕೀಲರು, ಕನ್ನಡ ಪರ ಸಂಘಟನೆ ಮುಖಂಡ ಬೇಟಿ ನೀಡಿದರು. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಕೀಲರು ಮತ್ತು ಸಂಘಟನೆಯಿಂದ ದೂರು ನೀಡಿದ್ದು.ಇಡೀ ಗ್ರಾಮದಲ್ಲಿ ಇವರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.ಇದೇ ವೇಳೆಗೆ ಸ್ಥಳಕ್ಕೆ ರಂಗನಾಥ್ ಬಂಧುಗಳು ಬೇಟಿ ನೀಡಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಮಾತಿನ ಚಕಮಕಿ ನಡೆದಿದೆ.
ಕುಡಿತ ಮತ್ತಿನಲ್ಲಿ ಉಮೇಶ್ ನಿಂದ
ಸಂಘಟನೆ ಮುಖಂಡರು, ವಕೀಲರು, ಮತ್ತು ಸಿವಿಲ್ ಡ್ರೆಸ್ ನಲ್ಲಿದ್ದ ಪೋಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಲು ಮುಂದಾಗಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಮಾನುಷ ಕೃತ್ಯ ಇದಾಗಿದ್ದು ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ತಲೆ ತಗ್ಗಿಸುವ ವಿಚಾರವಾಗಿದೆ.