ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಗಳು ಎರಡು ದಿನಗಳಲ್ಲಾಗಬೇಕು: ನ್ಯಾಯಾಧೀಶರಾದ ಗಿರೀಶ್ ಸೂಚನೆ

ಜಿಲ್ಲಾ ಸುದ್ದಿ

ಸಮಾಜದಲ್ಲಿರುವ ಪ್ರತಿಯೊಬ್ಬ ಶೋಷಿತ ವರ್ಗದವರು ಸರ್ಕಾರದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದು ಇದಕ್ಕೆ ಅಧಿಕಾರಿಗಳು ಪೂರಕವಾಗಿ ಕೆಲಸ ಮಾಡಬೇಕೆಂದು ಜಿಲ್ಲಾ ನ್ಯಾಯಾಧೀಶರಾದ ಗಿರೀಶ್ ಹೇಳಿದರು. ಅವರು ನಾಯಕನಹಟ್ಟಿ ಪಟ್ಟಣದ ದೊಂಬಿ ದಾಸ ಮತ್ತು ಮುಂಡಾಳ ವರ್ಗದ ಅಲೆಮಾರಿ ಜನಾಂಗದವರು ಗುಡಿಸಲುಗಳಲ್ಲಿ ವಾಸವಿರುವ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು. ಮನುಷ್ಯನಿಗೆ ಅಗತ್ಯವಾಗಿರುವ ಶೌಚಾಲಯ ವಿದ್ಯುತ್ ಆಹಾರ ಪಡಿತರ ಶುದ್ಧವಾದ ಕುಡಿಯುವ ನೀರು ಒದಗಿಸುವ ಜವಾಬ್ದಾರಿ ಸರ್ಕಾರದ್ದಾಗಿದ್ದು ಸರ್ಕಾರ ನೀಡುವಂತಹ ಈ ಸೌಲಭ್ಯವು ಪ್ರತಿಯೊಬ್ಬರ ಹಕ್ಕಾಗಿದೆ.ಕಾಲೋನಿಗಳಲ್ಲಿ ಜನರಿಗೆ ವಿದ್ಯುತ್ ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಇದೆ ಎರಡು ದಿನಗಳೊಳಗಾಗಿ ತಾತ್ಕಾಲಿಕವಾಗಿ ಪರಿಹರಿಸಬೇಕು ಎಂದು ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಶ್ರೀಮತಿ ಲೀಲಾವತಿ ಅವರಿಗೆ ಸೂಚಿಸಿದರು ಸ್ಥಳದಲ್ಲಿ ಹಾಜರಿಗಿದ್ದ ತಹಶೀಲ್ದಾರ್ ರಘುಮೂರ್ತಿ ಮಾತನಾಡಿ, ಪಟ್ಟಣ ಪಂಚಾಯಿತಿಯು ಹಲವು ಜನರಿಗೆ ಸರ್ಕಾರಿ ಸರ್ವೆ ನಂಬರ್ ಗಳಲ್ಲಿ ಆಧಿಕೃತವಾಗಿಮನೆಗಳನ್ನು ಕಟ್ಟಿಕೊಂಡಿದ್ದುಇವರುಗಳು 94 ಸಿ ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಈ ಸರ್ವೇ ನಂಬರ್ ಗಳಲ್ಲಿ ಕ್ರೀಡಾಂಗಣಕ್ಕೆ ಜಮೀನು ಮೀಸಲಾಗಿದೆ ಕ್ರೀಡಾಂಗಣಕ್ಕೆ ಮೀಸಲಾದ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಈ ಮಂಜೂರಾತಿಯನ್ನು ಮೊದಲು ವಜಾ ಮಾಡಿ ತದನಂತರ ಇಲ್ಲಿಯ ಜನರಿಗೆ ಹಕ್ಕು ಪತ್ರ ವಿತರಿಸಬೇಕಾಗಿದೆ. ಉಳಿದಂತೆ ಸಾಮಾಜಿಕ ಭದ್ರತೆಯ ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಆಹಾರ ಪಡಿತರ ಚೀಟಿಗೆ ಸಂಬಂಧಪಟ್ಟಂತೆ ಶೇಕಡ 80 ರಷ್ಟನ್ನು ನೀಡಿದ್ದು ಉಳಿದಂತ 20 ಪರ್ಸೆಂಟ್ ಜನರಿಗೆದಾಖಲಾತಿಯನ್ನು ಪಡೆದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಹಾಜರಿದ್ದ ರಾಜಸ್ವ ನಿರೀಕ್ಷಕರದ ಚೇತನ್ ಕುಮಾರ್ ಗ್ರಾಮ ಲೆಕ್ಕಾಧಿಕಾರಿ ಉಮಾ ಇವರಿಗೆ ಸೂಚಿಸಿದರು ಕುಡಿಯುವ ನೀರು ಶೌಚಾಲಯ ವಿದ್ಯುತ್ ಸಮಸ್ಯೆಗಳ ಬಗ್ಗೆ ಶ್ರೀ ಮರಿಪಾಲಯ್ಯನವರು ವಿವರಿಸಿದರು ಪಟ್ಟಣ ಪಂಚಾಯತಿ ಸದಸ್ಯರಾದ ಮಹಾಂತೇಶ್ ಶ್ರೀಮತಿ ಮುದಿಯಪ್ಪ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಶ್ರೀಮತಿ ಲೀಲಾವತಿ ಗ್ರಾಮ ಲೆಕ್ಕಾಧಿಕಾರಿ ಉಮಾ ಮುಂತಾದವರು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *