ಮಹನೀಯರಿಗೆ ಜಾತಿ ಬೇಲಿ ಕಟ್ಟುವುದು ಸಮಾಜಕ್ಕೆ ನಷ್ಟ

ಜಿಲ್ಲಾ ಸುದ್ದಿ

 

ಕನಕ ದೇವರ ಪ್ರೀತಿ ಗೆದ್ದ ದಾಸ ಶ್ರೇಷ್ಠ

ಮಹನೀಯರಿಗೆ ಜಾತಿ ಬೇಲಿ ಕಟ್ಟುವುದು ಸಮಾಜಕ್ಕೆ ನಷ್ಟ

ಮಾಜಿ ಸಚಿವ ಎಚ್.ಆಂಜನೇಯ ಮಾಜಿ ಮಂತ್ರಿಯಾಗಿ ಉತ್ತಮ ಆಡಳಿತ ನೀಡಿ, ಬಳಿಕ ಆಧ್ಯಾತ್ಮಿಕದತ್ತ ಆಸಕ್ತಿ ಬೆಳೆಸಿಕೊಂಡು ದೇವರ ಪ್ರೀತಿಯನ್ನೇ ಗೆದ್ದ ಶ್ರೇಷ್ಠ ಸಂತ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹೊಳಲ್ಕೆರೆ ತಾಲೂಕು ತಾಳಿಕಟ್ಟೆ ಗ್ರಾಮದಲ್ಲಿ ಶನಿವಾರ ಕನಕ ಜಯಂತಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಸ್ಪೃಶ್ಯತೆ ನೋವು ಅನುಭವಿಸಿದವರಿಗೆ ಗೊತ್ತು. ಸ್ವತಃ ಕನಕದಾಸ ಮಂತ್ರಿ ಆಗಿದ್ದರೂ ಕುರುಬ ಜಾತಿಯ ವ್ಯಕ್ತಿ ಎಂಬ ಕಾರಣಕ್ಕೆ ದೇವಸ್ಥಾನ ಪ್ರವೇಶ ಮಾಡಲು ಆಗದೆ ಮನನೊಂದ ಅಸ್ಪಶ್ಯ ವರ್ಗದ ಜನನಾಯಕ. ತನ್ನ ಮೆಚ್ಚಿನ ಶ್ರೀಕೃಷ್ಣನ ದರ್ಶನ ಪಡೆಯಲು ನಡೆಸಿದ ಹೋರಾಟ ಅವಿಸ್ಮರಣೀಯ ಎಂದರು.

ಕನಕ ಕಿಂಡಿ ಕುರಿತು ವೈಜ್ಞಾನಿಕ ಹಾಗೂ ಜನರ ನಂಬಿಕೆ ಕುರಿತು ವಿವಾದ ಹುಟ್ಟು ಹಾಕುವುದಕ್ಕಿಂತ, ಜಾತಿ, ಧರ್ಮ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ ಕನಕನ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ಈ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ಶ್ರಮಿಸಬೇಕು ಎಂದರು.

 

 

ಹಳ್ಳಿಗಳಲ್ಲಿ ಎಲ್ಲ ಜಾತಿ ಜನರು ಒಗ್ಗೂಡಿ ಸಹೋದರರ ರೀತಿ ಭಾಳ್ವೆ ನಡೆಸಬೇಕಿದೆ. ಈಚೆಗೆ ಜಾತಿ, ಧರ್ಮಗಳ ಮಧ್ಯೆ ಕಂದಕ ಉಂಟು ಮಾಡುವ ವಾತಾವರಣಕ್ಕೆ ಮುಗ್ಧ ಜನರು ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಸದಾ ಎಚ್ಚರಿಕೆ ವಹಿಸಬೇಕು. ದೇವರ ಪ್ರೀತಿ ಗೆದ್ದ ಕನಕನ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು.
ಹಳ್ಳಿಗಳಲ್ಲಿ ಜನ ಒಗ್ಗಟ್ಟಿನಿಂದ ಇದ್ದರೆ ಮಾತ್ರ ತಮ್ಮೂರು, ತಮ್ಮ ಕುಟುಂಬದ ಪ್ರಗತಿ ಸಾಧ್ಯ ಎಂಬ ಸತ್ಯ ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಸ್ಪøಶ್ಯತೆ, ಮೌಢ್ಯತೆಗೆ ಅವಕಾಶ ಕೊಡದೇ ವೈಜ್ಞಾನಿಕ ಚಿಂತನೆ ಜೊತೆಗೆ ಪೂರ್ವಿಕರು ಕಟ್ಟಿಕೊಟ್ಟ ಸಾಂಪ್ರದಾಯಗಳನ್ನು ಸಹೋರತೆ ಬಾಂಧ್ಯವದಲ್ಲಿ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಬಸವಣ್ಣ, ಕನಕ, ಶ್ರೀಕೃಷ್ಣ, ವಾಲ್ಮೀಕಿ, ಅಂಬೇಡ್ಕರ್, ಬಾಬು ಜಗಜೀವನರಾಂ ಸೇರಿದಂತೆ ಅನೇಕ ಮಹನೀಯರ ಜಯಂತಿಗಳನ್ನು ಎಲ್ಲ ಸಮುದಾಯವರು ಒಗ್ಗೂಡಿ ಆಚರಿಸುವ ವಾತಾವರಣ ನಿರ್ಮಾಣ ಆಗಬೇಕು. ಸಾಧಕರಿಗೆ ಜಾತಿಯ ಸೋಂಕು ತಗುಲದಂತೆ ಜನರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದರು.

 

ಹಾಲುಮತ ಹೆಸರೇ ಸೂಚಿಸುವಂತೆ ಕುರುಬ ಸಮಾಜದವರು ಹಾಲಿನಂತ ಮನಸ್ಸಿನವರು. ಸ್ವತಃ ನೋವುಂಡು ಇತರರ ಏಳ್ಗೆಗೆ ಶ್ರಮಿಸುವ ಜನರು. ಇದಕ್ಕೆ ಉತ್ತಮ ಉದಾಹರಣೆ ಕನಕದಾಸರು. ಅಸ್ಪೃಶ್ಯತೆ ನೋವನ್ನುಂಡರೂ ಅಶಾಂತಿ ಮಾರ್ಗ ತುಳಿಯದೇ ಶ್ರೀಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿಕೊಂಡ ಕನಕ ನಮ್ಮೆಲ್ಲರಿಗೂ ಪ್ರಶ್ನಾತೀತ ನಾಯಕನಾಗಿ ಎದುರುಗೊಳ್ಳುತ್ತಾನೆ ಎಂದು ಹೇಳಿದರು.

ಸಿದ್ದರಾಮಯ್ಯ ಕೂಡ ಅನೇಕ ಸಂಕಷ್ಟ, ಸವಾಲುಗಳನ್ನು ಎದುರಿಸಿ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿದ ಮಹಾನ್ ನಾಯಕ. ಸಿದ್ದರಾಮಯ್ಯನವರ ಆಡಳಿತ ಬಡವರ ಪಾಲಿಗೆ ಸುವರ್ಣ ಯುಗವಾಗಿತ್ತು. ಈಗಲೂ ಅಂತಹ ಆಡಳಿತ ಮರುಸ್ಥಾಪನೆ ಆಗಬೇಕೆಂಬ ತುಡಿತ ಎಲ್ಲೆಡೆ ಜನ ವ್ಯಕ್ತಪಡಿಸಿದ್ದಾರೆ ಎಂದರು.
ಕುರುಬ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪ್ರಗತಿಗೆ ಹೆಚ್ಚು ಗಮನ ಹರಿಸಬೇಕು. ಕನಕ, ಸಿದ್ದರಾಮಯ್ಯನ ರೀತಿ ಜನ ಸೇವೆಗೆ ಬದ್ಧರಾಗಬೇಕು ಎಂದು ಹೇಳಿದರು.
ಗ್ರಾಮದಲ್ಲಿ ಕನಕ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ವಿವಿಧ ಸಮುದಾಯದ ಜನರು ಪಾಲ್ಗೊಂಡಿದ್ದರು. ಸಮುದಾಯದ ಪರವಾಗಿ ಆಂಜನೇಯ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.

ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಗ್ರಾಪಂ ಅಧ್ಯಕ್ಷೆ ಲಲಿತಾಬಾಯಿ, ಉಪಾಧ್ಯಕ್ಷ ಬಸವರಾಜ್, ಮುಖಂಡರಾದ ಗುಡಿಗೌಡ್ರು ಕೆಂಚಪ್ಪ, ಗುರಯ್ಯ ಒಡೆಯರ್, ಗೌಡ್ರು ಗುಮ್ನಣ್ಣ, ತಿಮ್ಮಯ್ಯ, ಕೃಷ್ಣಮೂರ್ತಿ, ಹಳ್ಳಪ್ಪ, ಧನಂಜಯ್, ರಾಮಗಿರಿ ರಾಜಣ್ಣ, ಕನಕಯುವಸೇನೆ ಮುಖಂಡ ತಿಮ್ಮಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *