ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ರಾಜಕೀಯ

ಕಾಂಗ್ರೆಸ್ ಅಧಿನಾಯಕಿ‌ ಸೋನಿಯಾ ಗಾಂಧಿ ವಿರುದ್ದ ಇಡಿ‌ಯನ್ನು‌ದುರ್ಬಳಕೆ ಮಾಡಿಕೊಂಡು ತನಿಖೆಯನ್ನು ‌ನಡೆಸುತ್ತಿರುವ ಬಿಜೆಪಿಯ ದ್ವೇಷದ ರಾಜಕಾರಣದ ವಿರುದ್ಧ ಇಂದು‌ ಬೆಂಗಳೂರಿನ ಹಳೆ ಕಾಂಗ್ರೆಸ್ ಕಚೇರಿಯ ಗಾಂಧಿ‌ ಪ್ರತಿಮೆ ಬಳಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯನ್ನು‌ ನಡೆಸಿದರು.

 

 


  1. ಕಾಂಗ್ರೆಸ್ ಮುಖಂಡರು ಬಿಜೆಪಿಯ ವಿರುದ್ಧ ಘೋಷಣೆಗಳನ್ನು‌ ಹಾಕಿದರು. ಬಿಜೆಪಿ ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ದ ದೌರ್ಜನ್ಯ ಮಾಡುತ್ತಿದ್ದು, ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ನಾಳೆಯೂ‌‌ ಕೂಡ ವಿಚಾರಣೆ ನಡೆಯಲಿದ್ದು, ಕಾಂಗ್ರೆಸ್ ನ ಪ್ರತಿಭಟನೆಯೂ ಮುಂದುವರೆಯಲಿದೆ.
    ಈ ಸಮಯದಲ್ಲಿ ಸಲೀಂ ಆಹಮದ್, ದಿನೇಶ್ ಗುಂಡೂರಾವ್, ಧ್ರುವನಾರಾಯಣ್ , ಪುಷ್ಪ ಅಮರನಾಥ್, ಕೆ ಜೆ ಜಾರ್ಜ್, ಜೆಜೆ ಹಟ್ಟಿ ತಿಪ್ಪೇಸ್ವಾಮಿ, ಕೆ ಹೆಚ್. ವಿಜಯಕುಮಾರ್ ಮತ್ತು ಅಭಯ ಚಂದ್ರ ಜೈನ್ ಭಾಗವಹಿಸಿದ್ದರು

Leave a Reply

Your email address will not be published. Required fields are marked *