ಒಂದು ಲಕ್ಷ ಕಾಂಗ್ರೆಸ್ ಕಾರ್ಯಕರ್ತರಿಂದ ಒಂದು ಲಕ್ಷ ಧ್ವಜ‌ ಹಿಡಿದು ಬೃಹತ್ ಪಾದಯಾತ್ರೆ

ರಾಜ್ಯ

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ನಡಿಗೆ ಕಾರ್ಯಕ್ರಮವು ಸಂಗೋಳ್ಳಿ‌ರಾಯಣ್ಣ ವೃತ್ತದಿಂದ ಆರಂಭಗೊಂಡಿತು.

 

 

ರಾಜ್ಯದಾದ್ಯಂತದಿಂದ ಸುಮಾರು‌ ಒಂದು‌‌ ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ‌ಭಾಗವಹಿಸಿದ್ದರು. ಒಂದು ಲಕ್ಷ ರಾಷ್ಟ್ರ ಧ್ವಜಗಳನ್ನು ಹಿಡಿದು ಒಂದು‌ ಲಕ್ಷಕ್ಕೂ ಹೆಚ್ಚು ಜನರು ಬೃಹತ್ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೃಹತ್ ನಡಿಗೆ ಕಾರ್ಯಕ್ರಮದಲ್ಲಿ ನೂರಾರು ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟಿದ್ದು ಕಂಡು ಬಂತು.
ಭಾರತಂಬೆಗೆ‌ಜಹ ಘೋಷ ಹಾಕುತ್ತಾ ಬೃಹತ್ ನಡಿಗೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ನಡೆದಿದ್ದು, ಇದರ ನೇತೃತ್ವವನ್ನು ಕೆಪಿಸಿಸಿ‌ಅಧ್ಯಕ್ಷ ಡಿಕೆ ಶಿವಕುಮಾರ್ ವಹಿಸಿದ್ದರು. ಇದೇ ಸಮಯದಲ್ಲಿ ಡಿಕೆ ಶಿವಕುಮಾರ್ ತಮಟೆ ಬಡಿಯುತ್ತಾ ಸಾಗಿದರು. ಅವರಿಗೆ ಚಿತ್ರದುರ್ಗದ ಕಾಂಗ್ರೆಸ್ ಮುಖಂಡ ಜೆಜೆ ಹಟ್ಟಿ ತಿಪ್ಪೇಸ್ವಾಮಿ ಸಾತ್ ನೀಡಿದ್ದರು.ಸಂಗೋಳ್ಳಿ‌ರಾಯಣ್ಣ ಪ್ರತಿಮೆಯಿಂದ ಹೊರಟ ಬೃಹತ್ ನಡಿಗೆಯೂ ನ್ಯಾಷನಲ್ ಕಾಲೇಜು ಅವರಣವನ್ನು ತಲುಪಿತು. ಇದರ ಮಧ್ಯೆ ಬೃಹತ್ ನಡಿಗೆಯಿಂದಾಗಿ ವಾಹನ ಸಂಚಾರಕ್ಕೂ ಕೂಡ ಅಲ್ಲಲ್ಲಿ ಅಡಚಣೆಯುಂಟಾಯಿತು.

Leave a Reply

Your email address will not be published. Required fields are marked *