ರಾಜ ರತ್ನನ ಮುಕುಟಕ್ಕೇರಿದ ಕರ್ನಾಟಕ ರತ್ನ

ದೇಶ

ಅಭಿಮಾನಿ‌ದೇವರುಗಳ ದೇವರು, ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯೋತ್ಸವದ ದಿನವಾದ ಇಂದು ಕರ್ನಾಟಕ ರತ್ನ ಬಿರುದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿ‌ ಗೌರವಿಸಿದರು.
ಮೂರು ತಿಂಗಳ ಮೊದಲೇ ಈ ಬಾರಿ ಕರ್ನಾಟಕ‌ರತ್ನಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದ ಸಿಎಂ ಬೊಮ್ಮಾಯಿ ಅವರು ಅದರಂತೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಅಶ್ವಿನಿ ಅವರು ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ತಮಿಳು ಚಿತ್ರ ರಂಗದ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಜೂನಿಯರ್ ಎನ್ ಟಿ ಆರ್ ಸೇರಿದಂತೆ ರಾಜ್ಯ ಹಲವಾರು ಸಚಿವರು ಗಣ್ಯರು ಸಾಕ್ಷಿಯಾದರು.

 

 

Leave a Reply

Your email address will not be published. Required fields are marked *