ಬಸ್ ಸ್ವರೂಪದಲ್ಲಿ ಬಂದ ಜವರಾಯ ಮೂರು‌ಜನರ ಬಲಿ ಪಡೆದ

ಕ್ರೈಂ

ಸರ್ಕಾರಿ ಬಸ್ಸೊಂದು  ಎದುರಿಗೆ ಬರುತ್ತಿದ್ದ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ  ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಯಲ್ಲಿ ನಡೆದಿದೆ.

 

 

ಶಿವಮೊಗ್ಗ ಚಿತ್ರದುರ್ಗ ಹೆದ್ದಾರಿಯ ಲ್ಲಿ ಬೈಕ್  ಸವಾರರು  ಹೊಗುವಾಗ ಸರಕಾರಿ ಬಸ್  ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಸ್ಥಳದಲ್ಲಿಯೇ ಮೂವರು ಸಾವನ್ನಪಿದ್ದು,
ಮೃತರನ್ನು ಮನೋಜ್  ಚಂದ್ರು ಮತ್ತು ಸತೀಶ್ ಎಂದು ಗುರುತಿಸಲಾಗಿದೆ. ಮೃತರು ಹೊಳಲ್ಕೆರೆ ತಾಲೂಕಿನ ರಂಗಾಪುರ ಮತ್ತು ಮಲೇನಳ್ಳೀ ನಿವಾಸಿಗಳು ಎಂದು ಗುರುತಿಸಲಾಗಿದೆ.ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *