ಬಿಜೆಪಿ ಯುವ ಜನತೆಯ ಕನಸು ಮತ್ತು ಆತ್ಮವಿಶ್ವಾಸವನ್ನು ಹಾಳು ಮಾಡುತ್ತಿದೆ

ದೇಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಯ ಕನಸು ಮತ್ತು ವಿಶ್ವಾಸವನ್ನು ನಾಶ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

 

 

ಅವರು ಚಳ್ಳಕೆರೆ ತಾಲೂಕಿನ ಗಿರಿಯಮ್ಮನ ಹಳ್ಳಿಯಲ್ಲಿ ಯುವ ಜನತೆಯೊಂದಿಗೆ ಸಂವಾದ ಸಭೆಯಲ್ಲಿ‌ ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಉದ್ಯೋಗ ಸೃಷ್ಠಿ ಮಾಡುವುದನ್ನು ನಾಶಪಡಿಸಿದ್ದಾರೆ. ಡಿ ಮಾನಿಟೈಸೇಷನ್ ನಿಂದಾಗಿಯೂ ದೇಶ ತೊಂದರೆಗೆ ಸಿಲುಕುವಂತೆ ಮಾಡಿದ್ದಾರೆ, ಇದರಿಂದ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಸರ್ಕಾರಕ್ಕೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಇಷ್ಟವಿಲ್ಲವಾಗಿದ್ದು, ಇದರಿಂದ ಯುವ ಶಕ್ತಿ ನಾಶವಾಗುತ್ತಿದೆ, ಇದೊಂದು ಅಪರಾಧವಾಗಿದೆ. ಇದ್ದಂತವರಿಗೆ ವ್ಯಾಪಾರೋದ್ಯಮ ಸ್ಥಾಪಿಸಲು ಹಾಗೂ ಅವರಿಗೆ ಉದ್ಯೋಗ ನೀಡುವುದರಿಂದ ಯಾವುದೇ ಪ್ರಯೋಜನ ವಿಲ್ಲ,ಇದೂ ಕೂಡ ಅಪರಾಧವಾಗಿದೆ.ಮುಂದಿನ ದಿನಗಳಲ್ಲಿ‌ ನಾವು ಖಾಲಿ ಸ್ಥಾನಗಳಿರುವ ಕಡೆಗಳಿಗೆ ಉದ್ಯೋಗ ಸೃಷ್ಟಿ ಮಾಡಿ ತುಂಬಿಕೊಳ್ಳುತ್ತೇವೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ. ಇದರಲ್ಲಿ ಯುವಜನತೆಗೆ ಆದ್ಯತೆ ನೀಡುತ್ತವೆ. ಸರಿಯಾದ ರೀತಿಯಲ್ಲಿ ಯೋಜನೆ ತಯಾರು ಮಾಡಿದರೆ ಯಾರೂ ಕೂಡ ಪಾರ್ಟ್ ಟೈಮ್ ಜಾಬ್ ಹುಡುಕುವ ಅವಶ್ಯಕತೆ ಇಲ್ಲ, ನೀವೆಲ್ಲಾ ಬಹಳಷ್ಟು ಬುದ್ದಿವಂತರೇ ಇದ್ದೀರಾ, ಅದರೆ ಅದರ ಸದ್ಬಳಕೆಯಾಗಬೇಕಿದೆ, ಆದರೆ ಬಿಜೆಪಿ ಸರ್ಕಾರಗಳು ಇದರ ಉಪಯೋಗ ಮಾಡಿಕೊಳ್ಳುತ್ತಿಲ್ಲ, ಉದ್ಯೋಗ ಸೃಷ್ಠಿ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಈ ಸಮಯದಲ್ಲಿ ಕೆಪಿಸಿಸಿ‌ ಅಧ್ಯಕ್ಷ. ಡಿಕೆ‌ಶಿವಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *