ಸಾಹಿತಿ ಮತ್ತು ವಿಮರ್ಶಕ. ಬಿಎಲ್ವೇಣು ಅವರಿಗೆ ಕೊಲೆ ಬೆದರಿಕೆಯ ಮೂರನೆ ಪತ್ರ ಬಂದಿದ್ದು, ಇದಕ್ಕೂ ಮುನ್ನ ಎರಡು ಪತ್ರಗಳು ಬಂದಿದ್ದವು, ಅವುಗಳಲ್ಲಿ ಹಿಂದೂ ವಿರೋಧ ನೀತಿಯನ್ನು ಅನುಸರಿಸುತ್ತಿರುವ ನೀವು ಕೂಡಲೇ ಕ್ಷಮೆ ಕೇಳಬೇಕು ಇಲ್ಲದೆ ಕಾಲನ ಪರಿಸ್ಥಿತಿ ಎದುರಿಸಬೇಕು ಎಂದು ಬೆದರಿಸಲಾಗಿತ್ತು.
ಇಂದು ಮತ್ತೊಂದು ಪತ್ರವನ್ನು ಕಳಹುಸಿರುವ ಹಿಂದು ಸಹಿಷ್ಣು ಎಂಬ ಹೆಸರಿನ ವ್ಯಕ್ತಿಯೂ ಅದರಲ್ಲಿ ನಿಮಗೆ ತಾಕತ್ತಿದ್ದರೆ ಪಿಎಫ್ ಐ, ಎಸ್ಡಿಪಿಐ,ಸಿಎಫ್ ಐ ಸಂಘಟನೆಗಳಿಗೆ ಬುದ್ದಿಹೇಳಿ ಎಂದು ಸವಾಲೆಸೆದಿದ್ದಾನೆ.
2047 ರ ವೇಳೆಗೆ ಭಾರತವು ಇಸ್ಲಾಮಿಕ್ ಆಳ್ವಿಕೆಯತ್ತಹೋಗುತ್ತದೆ ಎಂದು ಇಬ್ಬರು ಶಂಕಿತರು ಪಾಟ್ನಾದಲ್ಲಿ ಪೋಲಿಸರಿಗೆ ಬಹಿರಂಗ ಪಡಿಸಿದ್ದಾರೆ. ಅವರಿಗೆ ನೀವು ಬುದ್ದಿ ಹೇಳಬೇಕು, ನಮಗೆ ಬುದ್ದಿ ಹೇಳುವ ಅಗತ್ಯವಿಲ್ಲ, ಆದರೆ ನೀವುಗಳು ನಕಲಿ ಹೋರಾಟಗಾರರುಗಳು, ದೇವನೂರುಮಹಾದೇವ, ಜಿಎಸ್ ಸಿದ್ದರಾಮಯ್ಯ, ಮಾಜಿ ಸಿಎಂಸಿದ್ದರಾಮಯ್ಯ, ಹೆಚ್ಡಿ ಕುಮಾರ, ಬಿಕೆ ಹರಿಪ್ರಸಾದ್ ಹಾಗೂ 61 ಎಡಬಿಡಂಗಿಗಳು ನೀವು ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಬೇಡಿ ಎಂದುಹೇಳುವ ನೀವು ತಾಕತ್ತಿದ್ದರೆ ದೇಶ ದ್ರೋಹಿಗಳಿಗೆ ಬುದ್ದಿ ಹೇಳಿ ಎಂದು ಪತ್ರ ಬರೆದಿದ್ದು, ಹಿಂದೆ ನೀವು ಸಾವರ್ಕರ್ ವಿಚಾರದಲ್ಲಿ ನೀವು ಇನ್ನು ಕ್ಷಮೆ ಕೇಳಿಲ್ಲ ಕ್ಷಮೆಕೇಳಿಎಂದು ಪತ್ರದಲ್ಲಿ ಬರೆದಿದ್ದಾನೆ.
ಸುದ್ದಿ ಮತ್ತು ಜಾಗೀರಾತಿಗಾಗಿ ಸಂಪರ್ಕಿಸಿ: 8660924503