ಕಾಂಗ್ರೆಸ್ ತನ್ನದೇ ಶಿಕ್ಷಣ ನೀತಿ ಜಾರಿ ಮಾಡಿ ಶಿಕ್ಷಕರು ಮಕ್ಕಳಿಗೆ ಸಮಸ್ಯೆಯಾಗಿದೆ: ಕೆಎಸ್ ನವೀನ್

ದೇಶ

 

ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿಯನ್ನು ತೋರದೆ ವಿವಿಧ ರೀತಿಯಾ ಆದೇಶಗಳನ್ನು, ಜಾರಿ ಮಾಡುವುದರ ಮೂಲಕ ಮಕ್ಕಳು ಮತ್ತು ಶಿಕ್ಷಕರಿಗೆ ಹೊರೆಯಾಗಿದೆ, ಇದನ್ನು ತಪ್ಪಿಸಲು ಪರಿಷತ್ನಲ್ಲಿ ಬಿಜೆಪಿಯ ಸಂಖ್ಯಾ ಬಲ ಹೆಚ್ಚಾಗಿರಬೇಕು ಹಿನ್ನಲೆಯಲ್ಲಿ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ..ನಾರಾಯಣಸ್ವಾಮಿಗೆ ಮತ ಹಾಕುವಂತೆ ಮತದಾರರಿಗೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮನವಿ ಮಾಡಿದರು.

ಚಿತ್ರದುರ್ಗ ನಗರದ ಜೆಎಂಐಟಿಯಲ್ಲಿ ಇಂದು ವಿವಿಧ ಕಾಲೇಜಿನಲ್ಲಿನ ಮತದಾರರನ್ನು ಭೇಟಿಯಾಗಿ ಮತಯಾಚಿಸಿ, ಮಾತನಾಡಿದ ಅವರು, ಕೇಂದ್ರ ಸರ್ಕಾರ ದೇಶದಲ್ಲಿ ಎನ್..ಪಿ. ಜಾರಿ ಮಾಡಲು ಹೊರಟಿದೆ, ಇದರಿಂದ ಈಗ ಅಲ್ಲದಿದ್ದರೂ ನಮ್ಮ ಮುಂದಿನ ಪೀಳೀಗೆಗೆ  ಪ್ರಯೋಜನ ದೊರಕಲಿದೆ. ಅದರೆ ರಾಜ್ಯ ಸರ್ಕಾರ ಇದನ್ನು ವಿರೋಧಿಸುತ್ತಿದೆ, ಇದರ ಬದಲಿಗೆ ಎಸ್..ಪಿ.ಯನ್ನು ಜಾರಿ ಮಾಡಲು ಮುಂದಾಗಿದ್ದು ಇದಕ್ಕಾಗಿ ೧೫ ಜನರ ಸಮಿತಿ ರಚನೆ ಮಾಡಿದೆ. ಇದರಲ್ಲಿ ಮೂರು ಜನ ಮಾತ್ರ ಕರ್ನಾಟಕದವರಾಗಿದ್ದಾರೆ. ಉಳಿದ ೧೨ ಜನ ಬೇರೆ ರಾಜ್ಯದವರಾಗಿದ್ದಾರೆ ಅಲ್ಲದೆ ಇದರ ಅಧ್ಯಕ್ಷರು ದೆಹಲಿಯವರಾಗಿದ್ದಾರೆ, ನಮ್ಮ ರಾಜ್ಯದ ಶಿಕ್ಷಣದ ಬಗ್ಗೆ ನಿರ್ಧಾರ ಮಾಡಲು ಬೇರೆ ರಾಜ್ಯದವರನ್ನು ಸರ್ಕಾರ ನೇಮಕ ಮಾಡಿರುವುದು ನಮ್ಮ ದುರಂತ ಎಂದರು

 

 

ಕಾಂಗ್ರೆಸ್ ಸರ್ಕಾರ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಕಾನೂನುಗಳನ್ನು ಮಾಡಿ, ಪರಿಷತ್ಗೆ ಕಳುಹಿಸುತ್ತಾರೆ ಇಲ್ಲಿ ನಮ್ಮ ಬಿಜೆಪಿಯ ಸಂಖ್ಯೆ ಹೆಚ್ಚಾಗಿದ್ದರೆ ಅದು ಸರಿಯಾಗಿ ಇದ್ದರೆ ಪಾಸು ಮಾಡಬಹುದು, ಆದರೆ ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಾಗ ಅದನ್ನು ತಿರಸ್ಕರಿಸಬಹುದು ಇದಕ್ಕೆ ನಮ್ಮ ಸಂಖ್ಯಾ ಬಲ ಹೆಚ್ಚಾಗಿರಬೇಕಿದೆ ಇದರ ಬದಲು ಕಾಂಗ್ರೆಸ್ ಪಕ್ಷದ ಬಳ ಹೆಚ್ಚಾಗಿದ್ದರೆ ಅದು ಪಾಸಾಗುತ್ತದೆ. ಇದರಿಂದ ಮುಂದೆ ಮಕ್ಕಳು ಮತ್ತು ಶಿಕ್ಷಕರಿಗೆ ತೊಂದರೆಯಾಗುತ್ತದೆ. ಹಿನ್ನಲೆಯಲ್ಲಿ ನಿಮ್ಮ ಸಹಾಯ ಅಗತ್ಯವಿದೆ ಎಂದ ಅವರು, ನಾರಾಯಣಸ್ವಾಮಿಯವರು ಕಳೆದ ಮೂರು ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಮುಂದೆಯೂ, ನಿಮ್ಮ ಸೇವೆ ಮಾಡಬೇಕಾದರೆ ನಾರಾಯಣಸ್ವಾಮಿಯವರನ್ನು ಬೆಂಬಲಿಸಿ, ಚುನಾವಣೆಯಲ್ಲಿ ಅವರಿಗೆ ಮತ ಹಾಕಬೇಕಿದೆ. ಬೇರೆಯವರಿಂದಲೂ  ಹಾಕಿಸಿ ಎಂದು ನವೀನ್ ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ, ಶಿಕ್ಷಕರಿಗೆ ವಿವಿಧ ರೀತಿಯ ಭರವಸೆ ನೀಡಿತ್ತು. ಆದರೆ ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ ಮಾಡಿದೆ. ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ರೀತಿಯ ಒಲವನ್ನು ನೀಡಿದ್ದಾರೆ, ಇದರಿಂದ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಆದರೆ ರಾಜ್ಯ ಸರ್ಕಾರ ಇದನ್ನು ತಿರಸ್ಕಾರ ಮಾಡಿದೆ, ಇದರ ಬದಲಿಗೆ ತನ್ನದೆ ಆದ ಶಿಕ್ಷಣ ನೀತಿ ಜಾರಿ ಮಾಡಲು ಹೊರಟಿದೆ ಎಂದರು

ಸಂದರ್ಭದಲ್ಲಿ ರಾಜ್ಯ ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾರಜೋಳ, ಚಿತ್ರದುರ್ಗ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೈಲಜ ರೆಡ್ಡಿ, ಮುಖಂಡರಾದ ಶ್ರೀಮತಿ ಶ್ಯಾಮಲ, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *