ಸಿಎಂ ಬದಾವಣೆ ಖಾಯಂ ಪುನರುಚ್ಚರಿಸಿದ ಸಿದ್ದು

ಜಿಲ್ಲಾ ಸುದ್ದಿ ರಾಜಕೀಯ

ಸಿಎಂ ಬದಾವಣೆ ಖಾಯಂ ಪುನರುಚ್ಚರಿಸಿದ ಸಿದ್ದು

ಚಿತ್ರದುರ್ಗ,ನ05(ಸಂವಾ)-ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅಧಿಕಾರ ಕೆಳಗಿಳಿಯಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದರು.Chitradurga cm WL change siddu

 

 

ಅವರು ಖಾಸಗಿ ಕಾರ್ಯಕ್ರಮಕ್ಕೆ ಚಿತ್ರದುರ್ಗಕ್ಕೆ ಬಂದಾಗ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ರಾಜಕೀಯ ಪ್ರೇರಿತ ದಾಳಿಗಳು ನಡೆಯುತ್ತಿವೆ. ವಿನಯ್ ಕುಲಕರ್ಣಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.‌ಅದರೂ ಹಳೆ ಪ್ರಕರಣ ಈಗ ಓಪನ್ ಮಾಡಿ ಸಿಬಿಐ ತನಿಖೆ ನಡೆಸುವುದು ಅಗತ್ಯವಿರಲಿಲ್ಲ. ರಾಜ್ಯದಲ್ಲಿ ಇಬ್ವರು ಸಿಎಂಗಳಿದ್ದಾರೆ. ಅದರಲ್ಲಿ ವಿಜಯೇಂದ್ರ ಡಿ ಫ್ಯಾಕ್ಟರ್ ಸಿಎಂ ಎಂದರು. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಸಂಬಳ ಕೊಡಲೂ ದುಡ್ಡಿಲ್ಲದಾಗಿದೆ. ಉಪ ಚುನಾವಣೆಯಲ್ಲಿ ಹಣ ಖರ್ಚು ಮಾಡದೆ ನಾವು ಗೆಲುವಿನ ಸಮೀಪಕ್ಕೆ ಬಂದಿದ್ದೆವೆ ಎಂದು ಹೇಳಿಕೆ ಕೊಟ್ಟಿರುವ ಎಚ್ಡಿಕೆ ಅವರು ಯಾವಾಗಲೂ ಹರಿಶ್ಚಂದ್ರರೆ ಎಂದು ಟಾಂಗ್ ಕೊಟ್ಟರು. ಕಟೀಲ್ ಬೇಜವಾಬ್ದಾರಿ ಹೇಳಿಕೆಗಳನ್ನು‌ನೀಡುತ್ತಾರೆ ಅವರು ಏನು ಮಾತನಾಡುತ್ತಾರೆ ಎಂದು ಅವರಿಗೆ ತಿಳಿದಿರುವುದಿಲ್ಲ. ಶಾಲಾ ಕಾಲೇಜುಗಳು ಆರಂಭಿಸುವುದು ಬೇಡ , ಎಲ್ಲರನ್ನು ಪಾಸ್ ಮಾಡಲಿ ಕೊರೋನಾ ಅತಂಕದಲ್ಲಿ ಪಂಚಾಯಿತಿ ಚುನಾವಣೆಗಳು ನಡೆಸಬಾರದು ಎಂದರು. ನನ್ನ ಮತ್ರು ಡಿಕೆಶಿ ನಡುವೆ ಸಿಎಂ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲ. ಅಭಿಮಾನಿಗಳು ಮಾತನಾಡುತ್ತಾರೆ. ಅಷ್ಟಕ್ಕೂ ಚುನಾವಣೆ ಇನ್ನು ದೂರವಿದೆ ಎಂದು ಹೇಳಿದರು.

ಸಂಯುಕ್ತವಾಣಿ

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *