ಚಿತ್ರದುರ್ಗ: ನಾನು ವಿಷ್ಣು ದಾದಾ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ತಪ್ಪು ನನ್ನನ್ನು ಕ್ಷಮಿಸಿಬಿಡಿ ಎಂದು ತೆಲುಗು ನಟ ವಿಜಯರಂಗರಾಜು ಗೋಳಾಡಿ ಕ್ಷಮೆ ಕೇಳಿದ್ದಾನೆ..
ನಾನು ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿರುವವನು, ಕ್ಷಮಿಸಿಬಿಡಿ ಬಾಯಿ ತಪ್ಪಿ ಮಾತನಾಡಿದ್ದೇನೆ ಎಂದು ಗೋಳಾಡಿ ಬೇಡಿಕೊಂಡ ವಿಜಯ ರಂಗರಾಜು ವಿಷ್ಣು ದಾದಾ ಹಾಗೂ ಅವರ ಕುಟುಂಬದವರನ್ನು ಹಾಗೂ ಕನ್ನಡಿಗರನ್ನೂ ಕ್ಷಮೆ ಕೇಳಿಕೊಂಡ ವಿಜಯರಂಗರಾಜು, ಹಾಗೂ ಪುನೀತ್ , ಸುದೀಪ್ ಹಾಗು ಉಪೇಂದ್ರ ಅವರಲ್ಲಿಯೂ ಕೂಡ ಕ್ಷಮೆ ಕೇಳಿದ್ದಾನೆ. ಅವಹೇಳನಕಾರಿಯಾಗಿ ಮಾತನಾಡಿದ್ದ ವಿಜಯರಂಗರಾಜು ಕನ್ನಡಿಗರ, ವಿಷ್ಣು ಅಭಿಮಾನಿಗಳು ಅವರ ಆಕ್ರೋಶಕ್ಕೆ ಕಾರಣರಾಗಿದ್ದ ಸರಿಯಾದ ಬುದ್ದಿ ಕಲಿಸುವ ಎಚ್ಚರಿಕೆಯನ್ನು ಕೂಡ ವಿಜಯರಂಗರಾಜುಗೆ ನೀಡಲಾಗಿದ್ದು ಇಂದು ಕ್ಷಮೆಯನ್ನು ಕೇಳಿದ್ದಾನೆ.
ಸಂಯುಕ್ತವಾಣಿ