ಸಿದ್ದರಾಮಯ್ಯಾಗೆ ಮತಿ‌ಭ್ರಮಣೆಯಾಗಿದೆ

ಆರೋಗ್ಯ

ಚಿತ್ರದುರ್ಗ:ಸಿದ್ದರಾಮಯ್ಯ ಅವರಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆಯಾಗಿದೆ. ಇದಕ್ಕಾಗಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕಿಡಿ ಕಾರಿದರು.

Chitradurga ramulu kidi

ಅವರು ಇಂದು‌ಜನಸೇವಕ ಕಾರ್ಯಕ್ರಮಕ್ಕೆ ಕೋಟೆ ನಾಡಿಗೆ ಬಂದು ಮಾಧ್ಯಮದವರೊಂದಿಗೆ ಮಾತ‌ನಾಡುತ್ತಾ, ಕಾಂಗ್ರೆಸ್ ಪಕ್ಷ ಒಡೆದು ಮೂರು ಬಾಗಿಲಾಗಿದೆ. ಮೊದಲು ಅವರ ಮನೆಯ‌ನ್ನು ಸರಿ ಮಾಡಿಕೊಳ್ಳಲಿ, ಡಿಕೆ ಶಿವಕುಮಾರ್, ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಹೀಗೆ ಮೂರು ಬಾಗಿಲಾಗಿದೆ. ಇನ್ನು ಸಿದ್ದರಾಮಯ್ಯ ಬಾದಾಮಿಯಲ್ಲಿ ಮುಂದಿನ ಬಾರಿ ಗೆಲ್ಲುವುದು ಕಷ್ಟವಾಗಿದೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿ ಅವರಿಗೆ ತೊಂದರೆ ಕೊಟ್ಟು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು, ಸಿದ್ದರಾಮಯ್ಯ ಅವರಿಗೆ ಮತಿ ಭ್ರಮಣೆಯಾಗಿದೆ.

 

 

Chitradurga ramulu kidi

ಇದಕ್ಕೆ ಹೀಗೆ ಮಾತ‌ನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿದಂತೆ ಯಡಿಯೂರಪ್ಪ ಅವರನ್ನು ಕೆಳಗಿಳಿಸುವುದು ಹಗಲು‌ಕನಸು. ಬಾಯಿ ಚಟಕ್ಕಾಗಿ, ಬಾಯಿಗೆ ಬಂದತೆ ಮಾತನಾಡುವುದು ಸರಿಯಲ್ಲ.
ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ವೈಯುಕ್ತಿಕವಾದದ್ದು, ಪಕ್ಷಕ್ಕೆ ಬಮನದ ಎಲ್ಲರಿಗೂ ಸಿಎಂ ಸ್ಥಾನ ಮಾನ ನೀಡಿದ್ದಾರೆ. ಇಂದು ಅಥವ ನಾಳೆ ಹೊಸ ಸಚಿವರ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದಾಗ ಅವರ ಜೊತೆ ನಾನು ಕೆಲಸ ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡಿದ್ದರೆ ಜ‌ನರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನು ತಿಪ್ಪಾರೆಡ್ಡಿ ಅವರು ಶ್ರೀರಾಮುಲುಗೆ ಜಿಲ್ಲೆಯ ಅಭಿವೃದ್ದಿಗೆ ಕಾಳಜಿ ಇಲ್ಲ ಎಂಬ ಹೇಳಿಕೆಗೆ ನಾನು ಅವರ ವೈಯುಕ್ತಿಕ ನಿಲುವಿನ ಬಗ್ಗೆ ಸಮಾಧಾನ ಮಾಡಲು ಹೋಗೊಲ್ಲ. ಅದು ಅವರಿಗೆ ಬಿಟ್ಟ ವಿಚಾರ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *