ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ : ಮತ್ತಿಬ್ಬರು ಪೊಲೀಸರಿಗೆ ಶರಣರು

ರಾಜ್ಯ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್ ಮತ್ತು ಗ್ಯಾಂಗ್ ನ ಆರು ಮತ್ತು ಏಳನೆ ಆರೋಪಿಗಳಾದ ಅನಿಲ್ ಮತ್ತು ಜಗ್ಗಾ ಇಂದು ಚಿತ್ರದುರ್ಗದ ಡಿವೈಎಸ್ಪಿ ಕಚೇರಿಗೆ ಬಂದು ಶರಣಾಗಿದ್ದಾರೆ.
ನಿನ್ನೆ ಯಷ್ಟೆ ಕಾರು ಚಾಲಕ ರವಿ ಕೂಡ ದಿನಕರ್ ಮುಂದೆ ಶರಣಾಗಿದ್ದ, ಇದರ ಬೆನ್ನಲ್ಲೆ ಅನಿಲ್ ಮತ್ತು ಜಗ್ಗಾ ಇಬ್ಬರು ಡಿವೈಎಸ್ಪಿ ದಿನಕರ್ ಮುಂದೆ ಸರಂಡರ್ ಆಗಿದ್ದಾರೆ. ಈ ಇಬ್ಬರು ರಘು ಆಲಿಯಾಸ್ ರಾಘವೇಂದ್ರ ನ ಜೊತೆಗೂಡಿ ರೇಣುಕಾ ಸ್ವಾಮಿಯ‌ನ್ನು ಆಟೋ ಮತ್ತು ಕಾರಿನಲ್ಲಿ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆದೊಯ್ದಿದ್ದರು. ಇಂದು ಶರಾಣದ ಇಬ್ಬರನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

 

 

Leave a Reply

Your email address will not be published. Required fields are marked *