ಅವ ಟಾಟಾ ಬಿರ್ಲಾ ಮೊಮ್ಮಗ ಅಲ್ವ ಬಡವರ ಬಗ್ಗೆ ಅವಗೇನು ಗೊತ್ತು?

ಜಿಲ್ಲಾ ಸುದ್ದಿ

ಚಿತ್ರದುರ್ಗ- ಅವನು ಟಾಟಾ ಬಿರ್ಲಾ ಮೊಮ್ಮಗ ಅಲ್ವ ಅವನಿಗೇನು ಗೊತ್ತಾಗುತ್ತೆ ಬಡವರ ಗೋಳು ಬಡವರ ಬಗ್ಗೆ ಕಾಳಜಿ ಇದ್ದರೆ ಗೊತ್ತಾಗ್ತಾ ಇತ್ತು ಮಾಜಿ ಸಚಿವ ಆಂಜನೇಯ ಹಾಲಿ ಶಾಸಕ ಚಂದ್ರಪ್ಪನ ಮೇಲೆ ವಾಗ್ದಾಳಿ ನಡೆಸಿದರು.Chitradurga he is tata birla grand son

 

 

ಕಳೆದ 17 ಮತ್ತು 18 ನೇ ಸಾಲಿನಲ್ಲಿ ಮೀಸಲು ಕ್ಷೇತ್ರವಾಗಿರುವ ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರ ಹಾಗೂ ತಾಲೂಕಿನಾದ್ಯಂತ ಜಾತಿ ಬೇಧವಿಲ್ಲದೆ ಕೊಳವೆ ಬಾವಿಯನ್ನು ಮಂಜೂರು ಮಾಡಲಾಗುತ್ತು. ರಾಜ್ಯದಲ್ಲಿ ಕೊಡುವಷ್ಟು ಕೊಳವೆ ಬಾವಿಗಳನ್ನು ತಂದು ಜನರಿಗೆ ಬಡ ರೈತರಿಗೆ ಕೊಟ್ಟಿದ್ದೇನೆ. ಆದರೆ ಹಾಲಿ ಶಾಸಕ ಚಂದ್ರಪ್ಪ ಅವುಗಳನ್ನು ಕೊರೆಯಕೂಡದು ಎಂದು ತಡೆ ಹಿಡಿದಿದ್ದಾನೆ. ಕೊಟ್ಟ ಅನ್ನವನ್ನು ಕಸಿದುಕೊಂಡಿದ್ದಾನೆ. ಇವನೊಬ್ಬ ಶಾಸಕನಾಗಲು ಯೋಗ್ಯನೆ ಎಂದು ಆಂಜನೇಯ ಪ್ರಶ್ನಿಸಿದರು. ಬಡವರ ಬಗ್ಗೆ ಎಂದೂ ಕಾಳಹಿ ಇಲ್ಲದ ವ್ಯಕ್ತಿ ಇವನು. ಮೂರು ವರ್ಷಗಳಿಂದ ರೈತರು ನೀರಿಲ್ಲದೆ ಇದ್ದಾರೆ. ಮೂರು ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆದಿದ್ದರೆ ಅವರ ತೆಂಗು, ಬಾಳೆ ಹಾಗೂ ಅಡಿಕೆ ತೋಟಗಳು ಹಸನಾಗಿ ಫಲವನ್ನು ಬಿಡುತ್ತಿದ್ದವು. ಒಬ್ಬ ಒಂದು ಕೊಳವೆ ಬಾವಿ ಕೊರೆಯಿಸಲು 5 ರಿಂದ 10 ಲಕ್ಷ ಹಣ ಖರ್ಚಾಗುತ್ತದೆ. ಆದರೆ ನಾವು ಸರ್ಕಾರದಿಂದ ಕೊಟ್ಟರೆ ಅದನ್ನು ತಡೆಹಿಡಿದಿದ್ದಾನೆ.ಅದ್ದರಿಂದ ಇಂದು ಕ್ಷೇತ್ರದ ರೈತರು ಚಂದ್ರಪ್ಪನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಎಂದು ಚಂದ್ರಪ್ಪ ನಡವಳಿಕೆ ವಿರುದ್ದ ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *