ದಾವಣಗೆರೆ: ಏನಾದರೂ ದೂರುಗಳಿದ್ದರೆ ಕೇಂದ್ರ ನಾಯಕರಿಗೆ ದೂರು ನೀಡಿ ಎಂದು ಸಚಿವ ಸ್ಥಾನ ಸಿಗದೆ ರೆಬಲ್ ಗಳಾಗಿರುವ ಶಾಸಕರುಗಳಿಗೆ ಸಿಎಂ ಬಿಎಸ್ ವೈ ಸವಾಲೆಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಹಿರಂಗವಾಗಿ ಮಾತನಾಡಿದರೆ ಅದು ಶಿಸ್ತಿಗೆ ದಕ್ಕೆಯಾಗುತ್ತದೆ. ಎಂದು ಎಚ್ಚರಿಕೆಯನ್ನು ನೀಡಿದರು.
ಯಶಸ್ವಿ ಮಂತ್ರಿ ಮಂಡಲ ರಚನೆಯಾಗಿದೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂದು 10ರಿಂದ 12 ಜನ ಶಾಸಕರು ಆರೋಪಿಸಿದ್ದಾರೆ.ನನ್ನ ಇತಿಮಿತಿಯೊಳಗೆ ನಾನು ಕೇಂದ್ರದ ವರಿಷ್ಠರ ಆದೇಶದಂತೆ ವಿಸ್ತರಣೆ ಮಾಡಿದ್ದೇನೆ. ಒಂದು ಸಚಿವ ಸ್ಥಾನ ಉಳಿಸಿಕೊಂಡಿದ್ದೆನೆ. ನನ್ನ ವಿರುದ್ದ ಕೇಂದ್ರದ ನಾಯಕರಿಗೆ ದೂರು ನೀಡಲು ನನ್ನ ಅಭ್ಯಂತರವಿಲ್ಲ. ಅದು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು. ಕೇಂದ್ರದ ನಾಯಕರ ಆಶೀರ್ವಾದದಿಂದ ಆಡಳಿತ ಉತ್ತಮವಾಗಿ ನಡೆಯುತ್ತಿದೆ. ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸುತ್ತೇನೆ ಈ ಬಜೆಟ್ ರೈತ ಪರವಾದ ಬಜೆಟ್. ಆಗಿರಲಿದೆ ಎಂದು ಬಿಎಸ್ ವೈ ಹೇಳಿದ್ದಾರೆ.
ಸಂಯುಕ್ತವಾಣಿ