ರಾಜ್ಯ ಉಸ್ತುವಾರಿ ಸಚಿವ ಸಂಪುಟದ ವಿಸ್ತರಣೆಗೆ ತೆರೆ ಎಳೆಯುತ್ತಾರಾ?

ರಾಜಕೀಯ

ಬೆಂಗಳೂರು: ಬಿಜೆಪಿಯ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯ ವಿಚಾರ ಮತ್ತೆ ಕೇಳಿ ಬರುತ್ತಿದೆ. ರಾಜ್ಯಕ್ಕೆ ಬಂದಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಏನು ಹೇಳುತ್ತಾರೆ ಎಂಬುವುದೇ ಕುತೂಹಲ ಮೂಡಿಸಿದೆ.

Chitradurga can arun Singh give ready for cabinet expantion

 

 

ಯಡಿಯೂರಪ್ಪ ಸಚಿವ ಸಂಪುಟದ ವಿಸ್ತರಣೆಯ ಹಾಗೂ ಆಕಾಂಕ್ಷಿಗಳ ಪಟ್ಟಿ ಹಿಡಿದು ದೆಹಲಿ ವರಿಷ್ಠರಿಗೆ ನೀಡಿ ಬಂದಿದ್ರು. ಸಚಿವ ಸಂಪುಟ ಇಂದು ನಾಳೆ ಆಗುತ್ತೆ ಅಂತಾನೇ ಹೇಳಿದ್ದ ಸಿಎಂ ಕೊನೆಗೆ ಅದರ ಬಗ್ಗೆ ಮಾತ‌ನಾಡುವುದನ್ನೇ ಬಿಟ್ಟಿದ್ದರು. ಇತ್ತ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಆರ್‌ ಶಂಕರ್, ಎಂಟಿಬಿ ನಾಗರಾಜ್ ಮತ್ತು ಹೆಚ್. ವಿಶ್ವನಾಥ್ ಅವರುಗಳು ಸಿಎಂ ಯಡಿಯೂರಪ್ಪ ಅವರ ಬಾಗಿಲು ಎಡತಾಕಿ ಒತ್ತಡವನ್ನು ಹೇರಿ ಬಂದಿದ್ದಾರೆ. ಆದರೆ ದೆಹಲಿಯಿಂದ ವರಿಷ್ಠರ ಸಂದೇಶದೊಂದಿಗೆ ಬಂದಿರುವ ಅರುಣ್ ಸಿಂಗ್ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳೊ ಬಗ್ಗೆ ಸಚಿವ ಸಂಪುಟ ವಿಸ್ತರಣೆ, ಸಚಿವರು ಬೇಕಾ ಬಿಟ್ಟಿ ಹೇಳಿಕೆ ನೀಡೋರಿಗೆ ಎಚ್ಚರಿಕೆ ಹಾಗೂ ಮೂಲ ಬಿಜೆಪಿಗರು ಹಾಗೂ ವಲಸಿಗರು ಎಂಬ ಕಿತ್ತಾಟ, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದಿರುವ ಸಭೆಗಳು ಹೀಗೆ ಒಂದಲ್ಲಾ 8 ಅಂಶಗಳನ್ನು ಹೊತ್ತು ತಂದಿರುವ ಅರುಣ್ ಸಿಂಗ್ ಇದೆಲ್ಲದಕ್ಕೂ ತೆರೆ ಎಳೆಯುತ್ತಾರಾ? ಎಂಬ ವಿಚಾರ ಕುತೂಹಲ‌ ಮೂಢಿಸಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *