ನವದೆಹಲಿಯಲ್ಲಿ ನಡೆಯಲಿರುವ ಎನ್.ಡಿ.ಎ ಒಕ್ಕೂಟದ ಸಂಸದ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಮಾಜಿ ಉಪ ಮುಖ್ಯಮಂತ್ರಿಗಳು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ನೂತನ ಸದಸ್ಯರಾದ ಗೋವಿಂದ ಕಾರಜೋಳರವರು ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ ಪುಷ್ಪ ಗುಚ್ಚವನ್ನು ನೀಡುವುದರ ಮೂಲಕ ಶುಭ ಕೋರಿದರು. ಇದರೊಂದಿಗೆ ಪ್ರಸುತ್ತ ವಿದ್ಯಾಮಾನದ ಬಗ್ಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ನೂತನ ಸಂಸದರಿಗೆ ದುಷ್ಯಂತ್ ಕುಮಾರ್ ಗೌತಮ್ ರವರು ಶಾಲು ಹೊದಿಸಿ ಅಂಬೇಡ್ಕರ್ ಪ್ರತಿಮೆಯನ್ನು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಗೋವಿಂದ ಕಾರಜೋಳರವರು ನವದೆಹಲಿಯಲ್ಲಿ ಮಾಜಿ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಧನ್ಯವಾದವನ್ನು ಅರ್ಪಿಸಿದರು.