ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಗೆ ಕಾಂಗ್ರೆಸ್ ಕಾರ್ಯಕರ್ತನಿಂದ ಬಹಿರಂಗ ಪತ್ರ

ಜಿಲ್ಲಾ ಸುದ್ದಿ

ಕಾಂಗ್ರೆಸ್ ಮುಖಂಡ ಹರಿಪ್ರಸಾದ್  ಗೆ ಕಾಂಗ್ರೆಸ್ ಕಾರ್ಯಕರ್ತನಿಂದ ಬಹಿರಂಗ ಪತ್ರ

 

 

ಹರಿಪ್ರಸಾದ್ ಅವರು ಹಿಂದಿನ ಸಭೆಯಲ್ಲಿ ಹೇಳಿದಂತೆ ನಮ್ಮ ದೇಶದಲ್ಲಿ ಐದು ರಾಜ್ಯದ ಮುಖ್ಯಮಂತ್ರಿ ಮಾಡಿರೋರು ನೀವು ನಿಮಗೆ ಮುಖ್ಯಮಂತ್ರಿ ಮಾಡೋದು ಗೊತ್ತು ಇಳಿಸುವುದು ಗೊತ್ತು, ಆದರೆ  ಮಂತ್ರಿ ಪದವಿ ಬಗ್ಗೆ ನಿಮ್ಮ ಸಮಾಜದ ಸಭೆ ಸಮಾರಂಭಗಳಲ್ಲಿ ಹೇಳೋದು ಸರಿ ಅನಿಸುತ್ತಿಲ್ಲ. ನೀವು ರಾಷ್ಟೀಯ ಮುಖಂಡರು.  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅತಿ ಹಿಂದುಳಿದ ಸಮಾಜದ ಸಮಾವೇಶದಲ್ಲಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಅವರನ್ನ ಹಾಗೂ ಅಲ್ಪಸಂಖ್ಯಾತರನ್ನ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಮಾಡಲಿಲ್ಲ ಎಂದು ಹೇಳಿದ್ದೀರಿ, ಇವರುಗಳನ್ನು ಹೈಕಮಾಂಡ್ ಉಪಮುಖ್ಯಮಂತ್ರಿ ಮಾಡಿಕೊಳ್ಳಲು ಹೇಳಿತ್ತಾ, ಹೇಳಿದ್ದರೆ ಮುಖ್ಯಮಂತ್ರಿಗಳು ಯಾಕೆ ಮಾಡಿಕೊಳ್ಳಲಿಲ್ಲ ನೀವು ಆಗ ಹೈಕಮಾಂಡ್ ಮುಂದೆ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಜನಗಳ ಮುಂದೆ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕಂದಿಕೆರೆ ಸುರೇಶ್ ಬಾಬು ಆಗ್ರಹಿಸಿದ್ದಾರೆ.
ನಿಮ್ಮ ಗೌರವ ನೀವು ಕಳೆದು ಕೊಳ್ಳಬಾರದು ನಿಮ್ಮ ಬಗ್ಗೆ ಹಿಂದುಳಿದ ಸಮಾಜಗಳಲ್ಲಿ ಗೌರವ ಇದೆ ಅದನ್ನ ಉಳಿಸಿಕೊಳ್ಳಿ ನೀವು ಮಂತ್ರಿ ಮುಖ್ಯ ಮಂತ್ರಿ ಆದ್ರೆ ರಾಜ್ಯದ ಜನತೆಗೆ ಸಂತೋಷ ಆಗುತ್ತದೆ. ಆದರೆ ಮಂತ್ರಿ ಪದವಿ ಹಾದಿ ಬೀದಿಯಲ್ಲಿ ಸಿಗುವ ಸ್ಥಾನವಲ್ಲವೆಂದು ನಿಮಗೂ ಗೊತ್ತು. ಯಾಕೆಂದ್ರೆ ನೀವು ಎಷ್ಟೋ ರಾಜ್ಯಗಳ ಮುಖ್ಯಮಂತ್ರಿಗಳನ್ನ ಮಾಡಿದವರು, ನಿಮ್ಮ ಕೈಯಲ್ಲಿ ಹೈಕಮಾಂಡ್ ಇದೆ. ನೀವು ಮಂತ್ರಿ ಆಗೋದು ಸುಲಭ. ಆದ್ರೆ ಸಿದ್ದರಾಮಯ್ಯನಂತ ಸಾಮಾನ್ಯ 1984ರಲ್ಲಿ ಯಾವುದೇ ರಾಜಕೀಯ ಬೆಂಬಲವಿಲ್ಲದೆ ಸಾಮಾನ್ಯ ವಕೀಲನಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷೇತರನಾಗಿ ಗೆದ್ದು 2023ರವರೆಗೂ ಹೋರಾಟದ ಮೂಲಕ ಚುನಾವಣೆಯಲ್ಲಿ ಸೋಲು ಗೆಲುವನ್ನು ಕಂಡು ಎರಡು ಬಾರಿ ಉಪಮುಖ್ಯಮಂತ್ರಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಅಗಿದ್ದಾರೆ. ಈ ರಾಜ್ಯದ ಜನಾಭಿಪ್ರಾಯ ಮತ್ತು ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಆಶೀರ್ವಾದದಿಂದ ಆಗಿರೋದು.  ನಿಮಗೂ ಗೊತ್ತಿದೆ. ನೀವು ಸಿದ್ದರಾಮಯ್ಯನವರನ್ನು ಜಾತಿವಾದಿ ಎಂದು ಸಮಾವೇಶದಲ್ಲಿ ಹೇಳಿದ್ದೀರಿ,ನಾನು ಸುಮಾರು ಇಪ್ಪತ್ತುವರ್ಷಗಳ ಕಾಲ ಅವರ ಜೊತೆ  ಒಡನಾಟ ಹೊಂದಿದ್ದರು ಸಹ ಅವರು ಹಿಂದೆ ಅಂದ್ರೆ 2013 ರಿಂದ 18ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ ಚಿತ್ರದುರ್ಗ ಜಿಲ್ಲಾ ಪಂಚಾಯತಿಗೆ ಒಪ್ಪಂದದ ಪ್ರಕಾರ ಅಧ್ಯಕ್ಷರಾಗುವ ಸಂದರ್ಭ ಬಂದಾಗ ಕುರುಬ ಸಮಾಜದವರು ಈಗಾಗಲೇ ಹಿಂದೆ ಜಿಲ್ಲೆಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಉಪ್ಪಾರ ಸಮಾಜದವರಿಗೆ ಸ್ಥಾನ ಸಿಕ್ಕಿಲ್ಲ ಹಾಗಾಗಿ ಉಪ್ಪಾರ ಸಮಾಜದ ಹೆಣ್ಣು ಮಗಳಿಗೆ ಅವಕಾಶ ಮಾಡಿ ಕೊಡಿ ಎಂದು ಜಿಲ್ಲೆಯ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದರು. ಅವರು ಸ್ವಜಾತಿಯವರಿಗಿಂತ ಮೊದಲು ಬೇರೆ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ಎಲ್ಲ ಶೋಷಿತ ಸಮಾಜಗಳಿಗೆ ಹೆಚ್ಚು ಸಹಾಯ ಮಾಡಿದ್ದಾರೆ. ರಾಜಕೀಯದಲ್ಲಿ ಪರಿಣಿತರಾದ ನೀವು ಜನಾಭಿಪ್ರಾಯದ ವಿರುದ್ಧ ಮಾತಾಡೋದು ನಿಮ್ಮಂತ ಕಟ್ಟಾ ಆರ್ ಎಸ್ ಎಸ್ ವಿರೋಧಿ ಹಾಗೂ ಕಟ್ಟಾ ಕಾಂಗ್ರೆಸಿಗರಾದ ನಿಮಗೆ ಸರಿ ಕಾಣುವುದಿಲ್ಲ. ನೀವು ಈ ರಾಜ್ಯದಿಂದ 30 ವರ್ಷಗಳ ಕಾಲ ರಾಜ್ಯಸಭೆ ಹಾಗು ವಿಧಾನ ಪರಿಷತ್ನಲ್ಲಿ ಸಭಾನಾಯಕನ ಸ್ಥಾನವನ್ನು ಅನುಭವಿಸಿದ ನೀವು ಹಿಂದೆಯೇ ಈ ರಾಜ್ಯದಿಂದ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬಹುದಿತ್ತು.? ಈಗ ಜನಾಭಿಪ್ರಯದಿಂದ ಆಯ್ಕೆ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದು ನನ್ನಂತ ನಿಮ್ಮ ಅಭಿಮಾನಿಗೆ ನಿಮ್ಮ ಹೇಳಿಕೆ ಸರಿ ಅನಿಸಲಿಲ್ಲ, ನೀವು ಸಹ ಮುಂದಿನ ಚುನಾವಣೆಯಲ್ಲಿ ಜನಪ್ರತಿನಿಧಿಯಾಗಿ ಗೆದ್ದು ಈ ರಾಜ್ಯದ ಹಿಂದುಳಿದ ನಾಯಕರಾದ ಬಂಗಾರಪ್ಪನವರಂತೆ ಸ್ವಂತ ಶ್ರಮದಿಂದ ರಾಜ್ಯದ ಮುಂದಿನ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬೇಕೆಂದು ನಾನು‌ ಆಶಿಸುತ್ತೇನೆ.

Leave a Reply

Your email address will not be published. Required fields are marked *