ಆಸ್ತಿ ವಿಚಾರಕ್ಕೆ ಜಗಳ ನಡೆದು ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೊಸದುರ್ಗದ ಲಕ್ಷ್ಮಿ ದೇವರಹಳ್ಳಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕುನ ಲಕ್ಷ್ಮಿದೇವರಹಳ್ಳಿಯಲ್ಲಿ ಜಮೀನಿನ ದಾರಿ ವಿಚಾರದಲ್ಲಿ ಪಾಲಾಕ್ಷಿ, ಬಸವರಾಜಪ್ಪ, ಚಂದ್ರಶೇಖರ್, ನಾಗರಾಜ್ ಸೇರಿದಂತೆ ಹಲವರ ನಡುವೆ ಜಗಳ ನಡೆದಿತ್ತು. ಆ ಜಗಳದಲ್ಲಿ ಪಾಲಾಕ್ಷಿ ಎಂಬ ಮಹಿಳೆಗೆ ರಾಜಪ್ಪ, ಬಸವರಾಜ್ ಚಂದ್ರಶೇಖರ್ ಮತ್ತು ನಾಗರಾಜ್ ಎಂಬುವರು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೃತ್ಯವೆಸಗಿರುವ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.ಘಟನಾ ಸ್ಥಳಕ್ಕೆ ಹೊಸದುರ್ಗ ಸಿಪಿಐ ತಿಮ್ಮಣ್ಣ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧನಾ ಕಾರ್ಯ ಆರಂಭವಾಗಿದೆ.