ಬಿಜೆಪಿ ಸಭೆಯ ಮಧ್ಯದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಮುಖಂಡ

ರಾಜ್ಯ

ಚಿತ್ರದುರ್ಗ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ವಿಭಾಗದ ಪ್ರಭಾರಿಗಳು ಆದ ಸಿದ್ದೇಶ್ ಯಾದವ್ ಅವರು ತೀವ್ರ ಹೃದಯಾಘಾತದಿಂದಾಗಿ ಮೃತರಾಗಿದ್ದಾರೆ.

 

 

ಬೆಂಗಳೂರಿನ ಮಲ್ಲೇಶ್ವರಂ ನ ಬಿಜೆಪಿ ರಾಜ್ಯ ಕಚೇರಿಯಲ್ಲಿ  ಬಿಜೆಪಿ ಮುಖಂಡರುಗಳ ಸಭೆ ನಡೆಯುತ್ತಿತ್ತು. ಸಭೆ ಮಧ್ಯದಲ್ಲಿ ಸಿದ್ದೇಶ್ ಯಾದವ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.  ಅಲ್ಲಿಂದ ಎದ್ದು ಹೊರಗೆ ಬಂದ  ಸಿದ್ದೇಶ್ ಯಾದವ್ ಅವರು ಗ್ಯಾಸ್ಟ್ರಿಕ್ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ.‌ಆದರೆ ನೋವು ಕಡಿಮೆಯಾಗಿಲ್ಲ ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಅವರನ್ನು  ಕೆ ಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ  ಅವರು ಸಾವನ್ನಪ್ಪಿದ್ದಾರೆ ಎಂದು  ಪಕ್ಷದ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *