BREAKING NEWS: ಕುಡಿದ ಅಮಲಿನಲ್ಲಿ ಚಾಕು ಚುಚ್ಚಿ ಯುವಕನ ಬಲಿ ಪಡೆದ ಗ್ಯಾಂಗ್
ಕೋಟೆ ನಾಡಿನಲ್ಲಿ ಯುವಕನ ಕೊಲೆಯ ಮೂಲಕ ಮಹಾ ಶಿವರಾತ್ರಿ ಅಂತ್ಯಗೊಂಡಿರುವ ಘಟನೆ ನಡೆದಿದೆ.
ಇಡೀ ರಾಜ್ಯವೇ ಶಿವನ ಭಜನೆ ಪೂಜೆ ಜಾಗರಣೆಯಲ್ಲಿ ತೊಡಗಿತ್ತು. ಆದರೆ ಯಾವುದೋ ಹಳೆಯ ದ್ವೇಷ ಹಾಗೂ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಒಂದು ಗುಂಪು ಚಾಕುವಿನಿಂದ ಚುಚ್ಚಿದೆ. ತೀವ್ರವಾಗಿ ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ನಗರದ ಕಬೀರಾನಂದ ಮಠದ ಬಳಿ ಇರುವ ಮಾರುತಿ( 23) ಕೊಲೆಯಾಗಿರುವ ಯುವಕ, ರಾತ್ರಿ 11.30 ರವರೆಗೆ ಎಲ್ಲವೂ ಸರಿ ಇತ್ತು. ಆದರೆ ಕೊಲೆಯಾದ ಯುವಕ ಮಾರುತಿ ಶಿವರಾತ್ರಿಯ ಹಬ್ಬದ ಹಿನ್ನೆಲೆಯಲ್ಲಿ ಕೋಟೆಗೆ ಶಿವನ ದರ್ಶನ ಪಡೆದು ವಾಪಸ್ಸು ಬರುವಾಗ ಅಲ್ಲೆ ಇದ್ದ ಕಾಮನಬಾವಿ ಬಡಾವಣೆಯ ಕುಡುಕರ ಗ್ಯಾಂಗ್ ಒಂದು ಚಾಕುವಿನಿಂದ ಅಟ್ಯಾಕ್ ಮಾಡಿದೆ. ಇದರಿಂದ ಮಾರುತಿ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಅವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಚಿಕಿತ್ಸೆ ಫಲಿಸದೆ ಶಿವನ ಪಾದವನ್ನೆ ಸೇರಿದ್ದಾನೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಭೇಟಿ ನೀಡಿದ್ದಾರೆ.ಘಟನೆಗೆ ಕಾರಣರಾದ ಆರೋಪಿಗಳು ನಾಪತ್ತೆಯಾಗಿದ್ದು, ನಗರಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.